ಜೈಲಿಂದ ಹೊರಬಂದ ವಿನಯ್ ಕುಲಕರ್ಣಿಗೆ ರಾಕಿ ಕಟ್ಟಿದ ಲಕ್ಷ್ಮೀ ಹೆಬ್ಬಾಳ್ಕರ್ !

masthmagaa.com:

ಕೊಲೆ ಪ್ರಕರಣದಲ್ಲಿ ಕಳೆದ 9 ತಿಂಗಳಿನಿಂದ ಜೈಲಿನಲ್ಲಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿಂದ ಜಾಮೀನಿನ ಮೇಳೆ ರಿಲೀಸ್ ಆಗಿದ್ದಾರೆ. ಜೈಲಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್​ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಕುಲಕರ್ಣಿ ಹಣೆಗೆ ತಿಲಕವಿಟ್ಟು, ಆರತಿ ಮಾಡಿ, ನಾಳೆ ರಕ್ಷಾ ಬಂಧನ ಹಿನ್ನೆಲೆ ರಾಕಿ ಕಟ್ಟಿದ್ರು. ಇನ್ನು ಜೈಲಿನ ಹೊರಗೆ ಭಾರಿ ಸಂಖ್ಯೆಯಲ್ಲಿ ಕುಲಕರ್ಣಿ ಟೀಮು ಜಮಾಯಿಸಿತ್ತು. ಕೋವಿಡ್ ನಿಯಮ, ವೀಕೆಂಡ್​ ಕರ್ಫ್ಯೂ ಎಲ್ಲವನ್ನ ಮರೆತಿದ್ರು. ಸ್ವತಃ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಮಾಸ್ಕ್ ಧರಿಸಿರಲಿಲ್ಲ. ಇದರ ಪರಿಣಾಮ ಜೈಲಿಂದ ರಿಲೀಸ್ ಆಗ್ತಿದ್ದಂತೇ ಕುಲಕರ್ಣಿ ವಿರುದ್ಧ ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply