ಮದೀಸಿ ಜಾಗದಲ್ಲಿ ದೇವಸ್ಥಾನ ಇತ್ತಾ ಅನ್ನೋ ಸರ್ವೇಗೆ ಕೋರ್ಟ್ ತಡೆ!

masthmagaa.com:

ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇರೋ ಗ್ಯಾನ್​​ವ್ಯಾಪಿ ಮಸೀದಿ ದೇವಸ್ಥಾನದ ಅವಶೇಷದ ಮೇಲೆ ನಿರ್ಮಿಸಲಾಗಿದೆಯಾ ಅಂತ ಪರೀಕ್ಷಿಸಲು ನಡೆಸಲು ಹೊರಟಿದ್ದ ಸರ್ವೇಗೆ ಅಲಹಾಬಾದ್ ಹೈಕೋರ್ಟ್​ ತಡೆ ನೀಡಿದೆ. ಈ ಜಾಗದಲ್ಲಿ ವಿಶ್ವೇಶ್ವರ ದೇವಸ್ಥಾನ ಇತ್ತು. ಮೊಘಲ್ ದೊರೆ ಔರಂಗಬೇಜ್ ಅದನ್ನು ಧ್ವಂಸಗೊಳಿಸಿ, ಅದ್ರ ಅವಶೇಷಗಳನ್ನೇ ಬಳಸಿ ಮಸೀದಿ ನಿರ್ಮಿಸಿದ ಅನ್ನೋ ಆರೋಪ ಇತ್ತು. ಈ ಸಂಬಂಧ 2019ರಲ್ಲಿ ವಕೀಲರೊಬ್ಬರು ವಾರಣಾಸಿಯಲ್ಲಿ ಅರ್ಜಿ ಸಲ್ಲಿಸಿದ್ರು. ಈ ವಿಚಾರಣೆ ನಡೆಸಿದ್ದ ವಾರಣಾಸಿ ಕೋರ್ಟ್​​, ಏಪ್ರಿಲ್​​ನಲ್ಲಿ ಸರ್ವೇ ನಡೆಸಲು ಭಾರತೀಯ ಪುರಾತತ್ವ ಸಮೀಕ್ಷೆ ಸಂಸ್ಥೆಗೆ ಸೂಚಿಸಿತ್ತು.

-masthmagaa.com

Contact Us for Advertisement

Leave a Reply