masthmagaa.com:
ಕಾಶಿ ವಿಶ್ವನಾಥ ದೇವಸ್ಥಾನದ ಬಳಿ ಇರೋ ಗ್ಯಾನ್ವ್ಯಾಪಿ ಮಸೀದಿ ದೇವಸ್ಥಾನದ ಅವಶೇಷದ ಮೇಲೆ ನಿರ್ಮಿಸಲಾಗಿದೆಯಾ ಅಂತ ಪರೀಕ್ಷಿಸಲು ನಡೆಸಲು ಹೊರಟಿದ್ದ ಸರ್ವೇಗೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಈ ಜಾಗದಲ್ಲಿ ವಿಶ್ವೇಶ್ವರ ದೇವಸ್ಥಾನ ಇತ್ತು. ಮೊಘಲ್ ದೊರೆ ಔರಂಗಬೇಜ್ ಅದನ್ನು ಧ್ವಂಸಗೊಳಿಸಿ, ಅದ್ರ ಅವಶೇಷಗಳನ್ನೇ ಬಳಸಿ ಮಸೀದಿ ನಿರ್ಮಿಸಿದ ಅನ್ನೋ ಆರೋಪ ಇತ್ತು. ಈ ಸಂಬಂಧ 2019ರಲ್ಲಿ ವಕೀಲರೊಬ್ಬರು ವಾರಣಾಸಿಯಲ್ಲಿ ಅರ್ಜಿ ಸಲ್ಲಿಸಿದ್ರು. ಈ ವಿಚಾರಣೆ ನಡೆಸಿದ್ದ ವಾರಣಾಸಿ ಕೋರ್ಟ್, ಏಪ್ರಿಲ್ನಲ್ಲಿ ಸರ್ವೇ ನಡೆಸಲು ಭಾರತೀಯ ಪುರಾತತ್ವ ಸಮೀಕ್ಷೆ ಸಂಸ್ಥೆಗೆ ಸೂಚಿಸಿತ್ತು.
-masthmagaa.com
Contact Us for Advertisement