masthmagaa.com:
ಕೇರಳದಲ್ಲೂ ಮಳೆಯಬ್ಬರ ಜೋರಾಗಿದ್ದು, ಪಟ್ಟನಂತಿಟ್ಟದಲ್ಲಿ ಪಂಪಾ ನದಿ ನೀರಿನ ಮಟ್ಟ ನಿರಂತರವಾಗಿ ಜಾಸ್ತಿಯಾಗುತ್ತಲೇ ಇದೆ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಭಕ್ತಾದಿಗಳು ಬರದಂತೆ ಇವತ್ತು ನಿರ್ಬಂಧಿಸಲಾಗಿತ್ತು. ಆನ್ಲೈನ್ನಲ್ಲಿ ಬುಕ್ ಮಾಡಿರೋ ಭಕ್ತಾದಿಗಳಿಗೆ ಮುಂದೊಂದು ದಿನ ಯಾವತ್ತಾದ್ರೂ ದರ್ಶನಕ್ಕೆ ಸ್ಲಾಟ್ ಕೊಡ್ತೀವಿ. ಭಕ್ತಾದಿಗಳು ಸಹಕರಿಸಿ ಅಂತ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಈಗಾಗಲೇ ನಿಲಕ್ಕಲ್ ತಲುಪಿರೋ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ನೀಡೀತ್ತು.
-masthmagaa.com
Contact Us for Advertisement