masthmagaa.com
ದೆಹಲಿಯಲ್ಲಿ ಈಗಾಗಲೇ ನೈಟ್ ಕ್ಲಬ್ಸ್, ಜಿಮ್ ಮತ್ತು ಸ್ಪಾಗಳನ್ನು ಮಾರ್ಚ್ 31ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ. ಇದೀಗ ಕರ್ನಾಟಕ ಮಾದರಿಯಲ್ಲೇ ಅದ್ಧೂರಿ ಸಮಾರಂಭಗಳನ್ನುಕೂಡ ನಿಷೇಧಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದಾರೆ. ಯಾವುದೇ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 50ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಅಂತ ಆದೇಶಿಸಿದ್ದಾರೆ. ಆದ್ರೆ ಈ ನಿರ್ಬಂಧ ಮದುವೆ ಸಮಾರಂಭಗಳಿಗೆ ಅನ್ವಯವಾಗೋದಿಲ್ಲ. ಆದ್ರೆ ಜನರೇ ಮದುವೆ ಸಮಾರಂಭಗಳಿಂದ ಸಾಧ್ಯವಾದಷ್ಟು ದೂರ ಇರಿ, ಮುಂದೂಡಲು ಯತ್ನಿಸಿ ಎಂದು ಮನವಿ ಮಾಡಿದ್ದಾರೆ.
masthmagaa.com
Contact Us for Advertisement