masthmagaa.com:
ಗಲಭೆ ಪೀಡಿತ ಮಣಿಪುರದಲ್ಲಿ ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್ಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಬಂಧಿಸಲಾಗಿದೆ. 19 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಈವರೆಗೂ 5 ಜನ ಆರೋಪಿಗಳನ್ನ ಬಂಧಿಸಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ. ಈ ದುಷ್ಕೃತ್ಯದಲ್ಲಿ ತೊಡಗಿದ್ದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗ್ತಿದ್ದು, ಹತ್ತಿರದಿಂದ ಮಾನಿಟರ್ ಮಾಡ್ತಿದ್ದೇನೆ ಅಂತ ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ. ಜೊತೆಗೆ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಜನರಲ್ಲಿ ಮನವಿ ಮಾಡಿದ್ದು, ಆಧಾರವಿಲ್ಲದ ವಿಡಿಯೋಗಳ ಸರ್ಕ್ಯುಲೇಶನ್ ಕುರಿತು ಕನ್ಫರ್ಮ್ ಮಾಡಿಕೊಳ್ಳಲು ಹೆಲ್ಪ್ಲೈನ್ ಪ್ರಾರಂಭಿಸಲಾಗಿದೆ. ಇದೇ ವೇಳೆ ಜನರ ಬಳಿಯಿರುವ ಶಸ್ತ್ರಾಸ್ತ್ರಗಳನ್ನ ಭದ್ರತಾ ಪಡೆಗಳು ಅಥ್ವಾ ಪೊಲೀಸರಿಗೆ ಒಪ್ಪಿಸಬೇಕು ಅಂತ ಮಣಿಪುರ ಸರ್ಕಾರ ಮನವಿ ಮಾಡಿದೆ.
-masthmagaa.com
Contact Us for Advertisement