masthmagaa.com: ಬಿಜೆಪಿ ಟಿಕೆಟ್‌ ಕೊಡಿಸೋದಾಗಿ ವಂಚನೆ ಕೇಸ್‌ನಲ್ಲಿ ಬಂಧಿಸಲಾಗಿರುವ ಚೈತ್ರ ಮನೆಯಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ. ಚೈತ್ರಾಗೆ ಸೇರಿದ 1.8 ಕೋಟಿ ರೂಪಾಯಿ Fixed Depositನ್ನ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ 65 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನೂ ಜಪ್ತಿ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಪ್ಪೂರು ಕೋ ಆಪರೇಟಿವ್ ಸೊಸೈಟಿಯಲ್ಲಿನ ಜಂಟಿ ಖಾತೆಯೊಂದರಲ್ಲಿ ಇರಿಸಲಾಗಿದ್ದ 40 ಲಕ್ಷ ರೂಪಾಯಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಈ ಸೊಸೈಟಿಯಲ್ಲಿ ಚೈತ್ರಾ – ಶ್ರೀಕಾಂತ್ ಅನ್ನೊ ಹೆಸರುಗಳಲ್ಲಿ ಈ ಜಂಟಿ ಖಾತೆ ತೆರೆಯಲಾಗಿತ್ತು. ಒಟ್ಟು ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಪೊಲೀಸರು ಜಪ್ತಿ ಮಾಡಿದ್ದಾರೆ. ಜೊತೆಗೆ ಬಾಗಲಕೋಟೆ ಜಿಲ್ಲೆ ಮುಧೋಳದ ಹಿಂದೂ ಕಾರ್ಯಕರ್ತ ಎನ್ನಲಾದ ಕಿರಣ್ ಗಣಪ್ಪಗೋಳ ಅನ್ನೋರ ಮನೆಯಲ್ಲಿ ಚೈತ್ರ ಕುಂದಾಪುರಗೆ ಸೇರಿದ ಕಿಯಾ ಕಾರು ಸಿಕ್ಕಿದ್ದು, ಆತನನ್ನ ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಚೈತ್ರ ಅಂಡ್‌Read More →

masthmagaa.com: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ 73ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಮಂತ್ರಿಗಳಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಹಲವರು ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಇತ್ತ ದೆಹಲಿಯ ದ್ವಾರಕಾದಲ್ಲಿ ಮೆಟ್ರೋ ವಿಸ್ತರಣೆಯ ಉದ್ಘಾಟನೆ ಮಾಡಲು ಮೆಟ್ರೋದಲ್ಲಿಯೇ ಮೋದಿ ತೆರಳಿದ್ದು, ಪ್ರಯಾಣಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದ್ದಾರೆ. ಬಳಿಕ ಯಶೋಭೂಮಿ ಕನ್ವೆನ್ಶನ್‌ ಹಾಲ್‌ ಹಾಗೂ ಮೆಟ್ರೋ ಸ್ಟೇಶನನ್ನ ಉದ್ಘಾಟನೆ ಮಾಡಿದ್ದಾರೆ. ಇನ್ನು ಇಂದು ವಿಶ್ವಕರ್ಮ ಜಯಂತಿ ಕೂಡ ಇರೋದ್ರಿಂದ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ದಾರೆ. ಇನ್ನೊಂದ್‌ ಕಡೆ ಉತ್ತರ ಪ್ರದೇಶದ ವಾರಣಸಿಯ ಮುಸ್ಲಿಂ ಮಹಿಳೆಯರ ಗುಂಪೊಂದು 73 ದೀಪಗಳನ್ನ ಹಚ್ಚುವ ಮೂಲಕ ಮೋದಿಯವರ ಹುಟ್ಟುಹಬ್ಬ ಆಚರಿಸಿದ್ದಾರೆ. ರಂಗೋಲಿ ಮತ್ತು ಮೋದಿಯವರ ಫೋಟೊಗೆ ಲಡ್ಡು ಇಡುವ ಮೂಲಕ ಮುಸ್ಲಿಂ ಮಹಿಳಾ ಫೌಂಡೇಶನ್‌ನ( MMF) ಸದಸ್ಯ ಮಹಿಳೆಯರು ವಿಶೇಷವಾಗಿ ಆಚರಣೆ ಮಾಡಿದ್ದಾರೆ. ಜೊತೆಗೆ ಎಲ್ಲಾ ಕಡೆಯೂ ಮೋದಿ ಸರ್ಕಾರವಿರಬೇಕು ಎಂದು ಮುಸ್ಲಿಂ ಸಹೋದರಿಯರ ಕರೆ ನೀಡಬೇಕುRead More →

masthmagaa.com: ಗಡಿಯಲ್ಲಿ ತಂಟೆ ಶುರು ಮಾಡಿರೋ ಪಾಕಿಸ್ತಾನಕ್ಕೆ ಭಾರತ ದೊಡ್ಡ ಎಚ್ಚರಿಕೆ ಕೊಟ್ಟಿದೆ. ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ನಿನ್ನೆ ಓರ್ವ ಭಯೋತ್ಪಾದಕನನ್ನ ಹೊಡೆದುರುಳಿಸಲಾಗಿತ್ತು. ಮೃತ ಉಗ್ರರ ದೇಹವನ್ನ ವಶಕ್ಕೆ ಪಡೆಯುವ ವೇಳೆ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನ ಸೇನೆ ಗುಂಡು ಹಾರಿಸಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಪಾಕಿಸ್ತಾನಕ್ಕೆ ವಾರ್ನಿಂಗ್‌ ಮಾಡಿದಾರೆ. ಭಾರತಕ್ಕೆ ಶತ್ರುಗಳಿದ್ದು, ಅವರು ಭಾರತ ಬೆಳೆಯುವುದನ್ನ ತಡೆಯಲು ಬಯಸುತ್ತಾರೆ. ಅದ್ರೆ ಅವ್ರಿಗೆ ಗೊತ್ತಿರ್ಲಿ ಭಾರತೀಯ ಸೇನೆ ಈಗ ಆಧುನೀಕರಣಗೊಂಡಿದೆ. ಹೈಟೆಕ್‌ ಹಾಗೂ ಡೇಂಜರಸ್‌ ಆಗಿದೆ. ಹೀಗಾಗಿ ಯಾವುದೇ ತಪ್ಪು ಮಾಡದೇ ಬುದ್ಧಿವಂತರಾಗಿರೋದನ್ನ ಕಲಿಯಿರಿ. ಯಾಕಂದ್ರೆ ಹೊಸ ಭಾರತ ಹೆದರೋದಿಲ್ಲ. ನಾವು ಹಿಂದೆಯೂ ಸರಿಯುವುದಿಲ್ಲ. ಭಾರತ ಈಗಾಗಲೇ ಯುದ್ಧವನ್ನ ಕಂಡಿದೆ. ನಾವು ಯುದ್ಧವನ್ನ ಬಯಸೋದಿಲ್ಲ. ಆದ್ರೆ ನೀವು ಭಾರತದ ಜೊತೆಯಲ್ಲಿ ಯುದ್ಧ ಮಾಡೋಕೆ ಹೋದ್ರೆ ಬೇರೆಯವರು ನಿಮ್ಮ ಮಕ್ಕಳನ್ನ ಬೆಳೆಸಬೇಕಾಗುತ್ತೆ ಅಂತ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮಹತ್ವದ ಬೆಳವಣಿಗೆಯಲ್ಲಿ ಯುರೋಪಿನ ಪ್ರಮುಖ ರಾಷ್ಟ್ರವೊಂದರಲ್ಲಿ ಜನ ಬೀದಿಗಳಿದು ಹೋರಾಟ ಶುರು ಮಾಡಿದ್ದಾರೆ. ಜೆಕ್‌ ರಿಪಬ್ಲಿಕ್‌ ಅನ್ನೋ ದೇಶದಲ್ಲಿ ಅಲ್ಲಿನ ಬಲಪಂಥೀಯ ಸರ್ಕಾರದ ವಿರುದ್ಧ ರಷ್ಯಾ ಪರವಿರುವ ಹಾಗೂ ಅಲ್ಲಿನ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಪರವಾಗಿರುವ ಹಾಗೂ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳ ವಿರೋಧಿ ಅಂತ ಕರೆಸಿಕೊಳ್ಳುವ PRO ಸಂಘಟನೆ ಈ ಪ್ರತಿಭಟನೆಗೆ ಕರೆ ನೀಡಿದೆ. ಜೆಕ್‌ ಪ್ರಧಾನಿ ಫಿಯಾಲಾ ಅವರ ಸರ್ಕಾರದಿಂದ ಮುಕ್ತಿ ಪಡೆಯಲು ನಾವು ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಅಂತ PRO ನಾಯಕ ಜಿಂಡ್ರಿಚ್ ರೈಚ್ಲ್ ಹೇಳಿದ್ದಾರೆ. ಇದೇ ವೇಳೆ ಈಗಿನ ಸರ್ಕಾರ ವಿದೇಶಿ ಶಕ್ತಿಗಳ ಏಜೆಂಟ್‌ಗಳಂತೆ ಕೆಲಸ ಮಾಡ್ತಿದೆ. ಅವರ ಆದೇಶಗಳನ್ನ ಜಾರಿ ಮಾಡುವ ಬೊಂಬೆಗಳ ರೀತಿ ವರ್ತಿಸ್ತಿದೆ. ಹೀಗಾಗಿ ನಾವು ಇನ್ಮುಂದೆ ಈ ರೀತಿಯ ಕೈಗೊಂಬೆ ಸರ್ಕಾರವನ್ನ ಬಯಸುವುದಿಲ್ಲ ಅಂತ ರೈಚ್ಲ್ ಕಿಡಿಕಾರಿದ್ದಾರೆ. ಅಷ್ಟೆ ಅಲ್ದೆ ನ್ಯಾಟೋ ಸೇರಲು ಇಚ್ಛಿಸಿರುವ ಯುಕ್ರೇನ್‌ನ ಯಾವುದೇ ಪ್ರಯತ್ನವನ್ನ ಜೆಕ್‌ ಗಣರಾಜ್ಯ ತಿರಸ್ಕರಿಸಬೇಕು ಅಂತ ರೈಚ್ಲ್ ಕರೆ ನೀಡಿದ್ದಾರೆ. ಅಂದ್ಹಾಗೆRead More →

masthmagaa.com: ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಅರ್ಪಿಸಿದ ಸ್ವಾತಂತ್ರ್ಯ ವೀರ ಭಗತ್‌ ಸಿಂಗ್‌ ಅವರ ಕುರಿತ ಕೇಸ್‌ನ್ನ ರೀ ಓಪನ್‌ ಮಾಡಿಸಲು ಪಾಕಿಸ್ತಾನದ ಲಾಹೋರ್‌ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯಲ್ಲಿ ಭಗತ್‌ ಸಿಂಗ್‌ರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನ ಮರುಪರಿಶೀಲನೆ ಮಾಡಿ, ಅವ್ರಿಗೆ ಮರಣೋತ್ತರ ರಾಷ್ಟ್ರ ಪ್ರಶಸ್ತಿಗಳನ್ನ ನೀಡಿ ಗೌರವಿಸುವಂತೆ ಮನವಿ ಮಾಡಲಾಗಿದೆ. ಆದ್ರೆ ದಶಕಗಳಷ್ಟು ಹಳೆಯ ಕೇಸ್‌ನ್ನ ರೀಓಪನ್‌ ಮಾಡಲು ಲಾಹೋರ್‌ ಹೈಕೋರ್ಟ್‌ ಆಕ್ಷೇಪಣೆ ವ್ಯಕ್ತಪಡಿಸಿದೆ ಅಂತ ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಇಮ್ತಿಯಾಜ್‌ ರಶೀದ್‌ ಖುರೇಷಿ ಹೇಳಿದ್ದಾರೆ. ಅಂದ್ಹಾಗೆ ಈ ರಶೀದ್‌ ಖುರೇಷಿಯವರು ಪಾಕಿಸ್ತಾನದ ಭಗತ್‌ ಸಿಂಗ್‌ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರೂ ಹೌದು. ಇವರು ಈ ಕೇಸನ್ನ ಪುನರ್‌ ಪರಿಶೀಲನೆ ಮಾಡಿ ಅಂತ ಆಗ್ರಹ ಮಾಡಿದ್ದಾರೆ. ʻಭಗತ್‌ ಸಿಂಗ್‌ ಅವ್ರು ಉಪಖಂಡದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು, ಸಿಂಗ್‌ರನ್ನ ಸಿಖ್ಖರು, ಹಿಂದೂಗಳು ಮಾತ್ರವಲ್ಲದೆ ಮುಸ್ಲಿಂರೂ ಗೌರವಿಸುತ್ತಾರೆ ಅಂತ ಅರ್ಜಿಯಲ್ಲಿ ಹೇಳಲಾಗಿದೆ. ಅಲ್ದೆ ಪಾಕಿಸ್ತಾನದ ಸಂಸ್ಥಾಪಕ ಮಹಮ್ಮದ್‌ ಅಲಿ ಜಿನ್ನಾ ಅವ್ರು ಪಾಕಿಸ್ತಾನ ಅಸೆಂಬ್ಲಿಯಲ್ಲಿ ತಮ್ಮ ಭಾಷಣದಲ್ಲಿ ಭಗತ್‌ ಸಿಂಗ್‌ ಬಗ್ಗೆRead More →

masthmagaa.com: ನೆದರ್‌ಲ್ಯಾಂಡ್ಸ್‌ ಪ್ರಧಾನಿ ಮಾರ್ಕ್ ರುಟೆ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನ ಭೇಟಿಯಾಗಿ ರಾಜ್ಯದಲ್ಲಿ ಹೂಡಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ಈ ವೇಳೆ ಸುಗಮ ಹೂಡಿಕೆಗೆ ಅವಕಾಶ, ರಾಜ್ಯದಲ್ಲಿನ ಹೂಡಿಕೆ ಸ್ನೇಹಿ ವಾತಾವರಣ, ನಿಯಂತ್ರಣ ವ್ಯವಸ್ಥೆ ಮತ್ತು ರಚನಾತ್ಮಕ ನೀತಿಗಳು, ಕೃಷಿ ಮತ್ತು ತೋಟಗಾರಿಕೆ ವಲಯಗಳಲ್ಲಿ ಸಹಭಾಗಿತ್ವದ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಗಿದೆ. ಈ ವೇಳೆ ಮಾತಾಡಿರುವ ಮಾರ್ಕ್‌, ಭಾರತದಲ್ಲಿ ತಮ್ಮ ದೇಶದ ಒಟ್ಟು 25 ಕಂಪನಿಗಳು ವಹಿವಾಟು ನಡೆಸುತ್ತಿವೆ. ಇವು ಭಾರತದಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ ಶೇ. 9ರಷ್ಟನ್ನು ಕರ್ನಾಟಕದಲ್ಲೇ ಇವೆ ಅಂತ ಹೇಳಿದ್ದಾರೆ. ಇತ್ತ ಮಾರ್ಕ್‌ ಅವ್ರು ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಟೀ ಕುಡಿದು, UPI ಮೂಲಕ ಹಣ ಪಾವತಿ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವ್ರು ಭೇಟಿಯಾಗಲಿದ್ದಾರೆ ಅನ್ನೋ ಸುದ್ಧಿ ಹರಿದಾಡಿತ್ತು. ಇದೀಗ ಕಿಮ್ಮಣ್ಣ ತಮ್ಮ ಖಾಸಗಿ ರೈಲಿನಲ್ಲಿ ರಷ್ಯಾ ತಲುಪಿದ್ದಾರೆ ಅಂತ ರಷ್ಯಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಕಿಮ್‌ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಈ ವಾರದ ಕೊನೆಯಲ್ಲಿ ಪುಟಿನ್‌ರನ್ನ ಭೇಟಿ ಮಾಡಲಿರುವ ಕಿಮ್‌, ಶಸ್ತ್ರಾಸ್ತ್ರ ಒಪ್ಪಂದದ ಕುರಿತು ಚರ್ಚೆ ನಡೆಸಲಿದ್ದಾರೆ ಅಂತ ತಿಳಿದು ಬಂದಿದೆ. ಈ ಬಗ್ಗೆ ಮಾತಾಡಿರುವ ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌, ಉಭಯ ನಾಯಕರು ಕೆಲವು ಸೂಕ್ಷ್ಮ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ ಅಂತ ಹೇಳಿದ್ದಾರೆ. ಜೊತೆಗೆ ನೆರೆ ದೇಶಗಳಾಗಿರೋದ್ರಿಂದ ಕೆಲವು ಸೂಕ್ಷ್ಮ ವಿಚಾರಗಳಲ್ಲಿ ಪರಸ್ಪರ ಸಹಕಾರ ಹೊಂದಿವೆ. ಹೀಗಾಗಿ ಅವುಗಳನ್ನ ಸಾರ್ವಜನಿಕವಾಗಿ ಡಿಸ್‌ಕ್ಲೋಸ್‌ ಮಾಡೋದಾಗ್ಲಿ ಅಥ್ವಾ ಅನೌನ್ಸ್‌ ಮಾಡೋಕೆ ಸಾಧ್ಯವಿಲ್ಲ ಹಾಗೂ ಇದೆಲ್ಲ ನೈಬರ್‌ ದೇಶಗಳಲ್ಲಿ ಸಾಮಾನ್ಯ ಅಂತ ಪೆಸ್ಕೋವ್‌ ಹೇಳಿದ್ದಾರೆ. ಇದೇ ವೇಳೆ ಅಮೆರಿಕದ ಎಚ್ಚರಿಕೆಯನ್ನ ಪುಟಿನ್‌ ಹಾಗೂ ಕಿಮ್ಮಣ್ಣ ಸೀರಿಯಸ್‌Read More →

masthmagaa.com: ಜಿ20 ಶೃಂಗಸಭೆಗಾಗಿ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಅವರು 36 ಗಂಟೆಗಳ ನಂತರ ತವರಿಗೆ ಮರಳಿದ್ದಾರೆ. ಸಭೆ ಮುಗಿದ ದಿನ ಅಂದ್ರೆ ಭಾನುವಾರನೇ ಟ್ರುಡು ಹಿಂದಿರುಗ ಬೇಕಿತ್ತು. ಆದ್ರೆ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಭಾರತದಲ್ಲೇ ಇದ್ದು, ಇದೀಗ ಕೆನಡಾಗೆ ತೆರಳಿದ್ದಾರೆ. ಇನ್ನು ಜಿ20 ಶೃಂಗಸಭೆಗಾಗಿ ಸೆಪ್ಟೆಂಬರ್‌ 8ರ ರಾತ್ರಿ ಭಾರತಕ್ಕೆ ಬಂದಿದ್ದರು. ಅವರ ವಿಮಾನ ಕೈಕೊಟ್ಟ ಹಿನ್ನಲೆಯಲ್ಲಿ ಒಟ್ಟು ನಾಲ್ಕು ದಿನ ಭಾರತದಲ್ಲಿದ್ದು, ಇಂದು ರಿಟರ್ನ್‌ ಆಗಿದ್ದಾರೆ. ಆದ್ರೆ ಸುಮಾರು 2 ದಿನಗಳ ಕಾಲ ವಿಮಾನ ಕೆಟ್ಟ ಕಾರಣಕ್ಕೆ ಭಾರತದಲ್ಲೇ ಉಳಿದುಕೊಂಡಿದ್ದಯ, ಒಂದು ರೀತಿ ಅತಿದೊಡ್ಡ ಅಪಮಾನವಾದಂತಾಗಿದೆ. ಅಂದ್ಹಾಗೆ ಇತ್ತೀಚೆಗೆ ಕೆನಡಾದಲ್ಲಿ ಖಲಿಸ್ತಾನಿ ಉಗ್ರರ ಉಪಟಳ ಹೆಚ್ಚಾಗಿದ್ದು, ಭಾರತ ವಿರೋಧಿ ಕೃತ್ಯಗಳು ಜಾಸ್ತಿಯಾಗ್ತಿವೆ. ಈ ಕಾರಣಕ್ಕೆ ಉಭಯ ದೇಶಗಳ ನಡುವೆ ಸಂಬಂಧ ಅಷ್ಟೇನು ಸರಿಯಾಗಿಲ್ಲ. ಅದ್ರಲ್ಲೂ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌, ಪಿಎಂ ಮೋದಿ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌Read More →

masthmagaa.com: ದೆಹಲಿಯಲ್ಲಿ ಇಂದು ನಡೆದ ಮೊದಲ ದಿನದ ಜಿ20 ಶೃಂಗಸಭೆಯಲ್ಲಿ 21ನೇ ಖಾಯಂ ಸದಸ್ಯವಾಗಿ ಆಫ್ರಿಕನ್‌ ಒಕ್ಕೂಟಕ್ಕೆ ಸ್ಥಾನ ನೀಡಲಾಗಿದೆ. ಈ ಬಗ್ಗೆ ಆಫ್ರಿಕಾದ ವಿವಿಧ ದೇಶಗಳ ನಾಯಕರು ಸಂಸತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಚಾಡ್‌ ದೇಶದ ಮಾಜಿ ಪ್ರಧಾನಿ ಮೌಸಾ ಫಕಿ ಮಹಾಮತ್‌ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ಹಲವು ವರ್ಷಗಳಿಂದ ಈ ಸ್ಥಾನಮಾನಕ್ಕಾಗಿ ಆಫ್ರಿಕಾದ ನಾಯಕರು ಪ್ರಯತ್ನಿಸುತ್ತಿದ್ದರು. ಇದೀಗ ಆಫ್ರಿಕಾ ಒಕ್ಕೂಟ ಜಿ20ಯಲ್ಲಿ ಸ್ಥಾನ ಪಡೆದಿರುವುದಕ್ಕೆ ಸಂತಸವಾಗುತ್ತಿದೆ’ ಎಂದಿದ್ದಾರೆ. ಇತ್ತ ಭಾರತದಲ್ಲಿ ಇಂದು ನಡೆದ ಸಭೆ ಯಶಸ್ವಿಯಾಗಿದ್ದು, ಜಿ20 ನಾಯಕರು ʻದೆಹಲಿ ಘೋಷಣೆʼ ಅಥ್ವಾ NewDelhi Leaders Declaration ನ್ನ ಸಂಪೂರ್ಣವಾಗಿ ಅಡಾಪ್ಟ್‌ ಮಾಡಿಕೊಂಡಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಅಂದ್ಹಾಗೆ ಈ ಘೋಷಣೆಯಲ್ಲಿ ಪ್ರಮುಖವಾಗಿ ರಷ್ಯಾ- ಯುಕ್ರೇನ್‌ ಯುದ್ಧದ ಬಗ್ಗೆ ಉಲ್ಲೇಖಿಸಲಾಗಿದ್ದು, ಈ ಯುಗ ಯುದ್ಧದ ಯುಗವಲ್ಲ ಅನ್ನೋದನ್ನ ಪುನರುಚ್ಛಾರ ಮಾಡಲಾಗಿದೆ. ಜೊತೆಗೆ ನ್ಯೂಕ್ಲಿಯಾರ್‌ ಶಸ್ತ್ರಾಸ್ತ್ರಗಳನ್ನ ಬಳಸುವ ಬಗ್ಗೆ ಬೆದರಿಕೆ ಹಾಕೋದನ್ನ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಅಂತ ಘೋಷಣೆಯಲ್ಲಿ ತಿಳಿಸಲಾಗಿದೆ. ಈ ಘೋಷಣೆಗೆ ಜಾಗತಿಕ ನಾಯಕರು ಒಮ್ಮತRead More →

masthmagaa.com: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗುವ ಭಾರತದ ಇಚ್ಛೆಯನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರೋದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್‌ ಹೇಳಿದ್ದಾರೆ. ಇದೇ ವೇಳೆ ಭದ್ರತಾ ಮಂಡಳಿಯಲ್ಲಿ ಯಾರು ಇರ್ಬೇಕು ಅಥ್ವಾ ಯಾರು ಇರ್ಬಾರ್ದು ಅಂತ ಡಿಸೈಡ್‌ ಮಾಡೋದು ನಾನಲ್ಲ. ಯಾಕಂದ್ರೆ ಅದು ಸದಸ್ಯ ರಾಷ್ಟ್ರಗಳಿಗೆ ಬಿಟ್ಟದ್ದು. ಆದ್ರೆ ಪ್ರಸ್ತುತ ಜಗತ್ತನ್ನ ಪ್ರತಿನಿಧಿಸುವ ಭದ್ರತಾ ಮಂಡಳಿ ಇರಬೇಕು ಅಂತ ನಾನು ನಂಬುತ್ತೇನೆ ಅಂತ ಗುಟೆರಸ್‌ ಹೇಳಿದ್ದಾರೆ. ಜೊತೆಗೆ ಈಗಿರುವ ಭಧ್ರತಾ ಮಂಡಳಿ ಎರಡನೇ ವಿಶ್ವ ಯುದ್ಧ ಆದ್ಮೇಲಿನ ಪ್ರಪಂಚವನ್ನ ಪ್ರತಿನಿಧಿಸುತ್ತೆ. ಆದ್ರೆ ಈಗಿನ ಜಗತ್ತೇ ಬೇರೆಯಾಗಿದ್ದು, ಭಾರತ ಅತಿಹೆಚ್ಚು ಜನಸಂಖ್ಯೆಯಿರುವ ದೊಡ್ಡ ಕಂಟ್ರಿಯಾಗಿದೆ. ಈ ನಿಟ್ಟಿನಲ್ಲಿ ಭಾರತದ ಇಚ್ಛೆ ಸರಿಯಾಗಿದ್ದು, ಭದ್ರತಾ ಮಂಡಳಿಯನ್ನ ಇನ್ನೊಮ್ಮೆ ಕಂಪೋಸ್‌ ಮಾಡುವ ಅಗತ್ಯವಿದೆ ಅಂತ ಹೇಳುವ ಮೂಲಕ ಭದ್ರತಾ ಮಂಡಳಿಗೆ ಸೇರುವ ಭಾರತದ ಇಚ್ಛೆಗೆ ಗುಟೆರಸ್‌ ಸಪೋರ್ಟ್‌ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →