ದೆಹಲಿ: ಅಯೋಧ್ಯೆಯಲ್ಲಿ 56ರಿಂದ 60 ಮದೀಸಿಗಳಿವೆ. ಮುಸ್ಲಿಮರು ಅವುಗಳಲ್ಲಿ ಎಲ್ಲಿ ಬೇಕಾದರೂ ಹೋಗಿ ನಮಾಜ್ ಮಾಡಬಹುದು. ಆದ್ರೆ ಇದು ರಾಮಜನ್ಮಭೂಮಿ ಒಂದೇ ಇರೋದು. ಅದನ್ನು ನಾವು ಬದಲಿಸಲು ಸಾಧ್ಯವಿಲ್ಲ ಅಂತ ಹಿಂದೂಗಳ ಪಕ್ಷದ ವಕೀಲರು ವಾದ ಮಂಡಿಸಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಅಯೋಧ್ಯೆ ವಿಚಾರವಾಗಿ ದೀರ್ಘಕಾಲದಿಂದ ವಿಚಾರಣೆ ನಡೆಯುತ್ತಿದೆ. ಅದರಲ್ಲೂ ಕಳೆದ 39 ದಿನಗಳಿಂದ ನಿರಂತರವಾಗಿ ವಿಚಾರಣೆ ನಡೆಯುತ್ತಿದ್ದು, ಅಕ್ಟೋಬರ್ 17ರೊಳಗೆ ಮುಗಿಸುವಂತೆ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಡೆಡ್ಲೈನ್ ಕೊಟ್ಟಿದ್ದಾರೆ. ನಿನ್ನೆಗೆ ಮುಸ್ಲಿಂ ಪಕ್ಷದ ವಾದ ಮುಗಿದಿದ್ದು, ಇಂದು ಹಿಂದೂ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ ವಕೀಲ ಪರಾಸರಣ್, ಮಸೀದಿ ಮಸೀದಿಯಾಗಿಯೇ ಇರುತ್ತೆ ಎಂದು ನಾವು ಒಪ್ಪುವುದಿಲ್ಲ. ಆದ್ರೆ ದೇವಸ್ಥಾನ ಯಾವಾಗಲೂ ದೇವಸ್ಥಾನವಾಗಿಯೇ ಇರುತ್ತೆ. ಇತಿಹಾಸದ ಬಗ್ಗೆ ಸುಪ್ರೀಂಕೋರ್ಟ್ಗೆ ಸುಳ್ಳು ಮಾಹಿತಿ ನೀಡಲಾಗಿದೆ. ಅದನ್ನ ಸರಿಪಡಿಸಬೇಕಿದೆ. ಯಾರೋ ವಿದೇಶದಿಂದ ಬಂದು ಇಲ್ಲಿ ತಮ್ಮ ಕಾನೂನನ್ನು ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.
ಇನ್ನೊಂದು ತಿಂಗಳಲ್ಲಿ ಅಂದ್ರೆ ನವೆಂಬರ್ 17ರಂದು ರಂಜನ್ ಗೊಗೊಯ್ ನಿವೃತ್ತಿ ಹೊಂದಲಿದ್ದು, ಅಷ್ಟರಲ್ಲಿ ಈ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.
Contact Us for Advertisement