masthmagaa.com:
ಪಾಕ್ ಪರ ಘೋಷಣೆ ವಿಚಾರವಾಗಿ ರಾಜ್ಯ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ದ ಮುಗಿಬಿದ್ದಿದೆ. ವಿಧಿ ವಿಜ್ಞಾನ(FSL) ವರದಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಅನ್ನೋ ಪದವನ್ನ ನಾಸೀರ್ ಸಾಬ್ ಜಿಂದಾಬಾದ್ ಅಂತ ತಿರುಚಲಾಗಿದೆ ಅಂತ ಬಿಜೆಪಿ ಆರೋಪಿಸಿದೆ. ಅಲ್ಲದೆ ಸತ್ಯವನ್ನ ತಿರುಚಿ ಸುಳ್ಳು ಸುದ್ದಿಗಳನ್ನ ಕಾಂಗ್ರೆಸ್ ಪ್ರಚಾರ ಮಾಡಿದೆ ಅನ್ನೊದನ್ನ ಈ ವರದಿ ಬಹಿರಂಗಪಡಿಸಿದೆ. ಅಲ್ದೇ ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಹೇಳೋ ಪ್ರಿಯಾಂಕ್ ಖರ್ಗೆ, ಈಗ್ಲಾದ್ರೂ ತಮ್ಮ ದೇಶದ್ರೋಹದ ಕೃತ್ಯಗಳನ್ನ ಒಪ್ಕೊಂಡು, ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರಲ್ಲಿ ಕ್ಷಮೆಯಾಚಿಸಲಿ ಅಂತ ಬಿಜೆಪಿ ಹೇಳಿದೆ. ಇನ್ನು ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೆಂದ್ರ, ʻಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ಭೂಗತ ಶಕ್ತಿಗಳಿಗೆ ಸ್ವಾತಂತ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ. ವಿಧಾನ ಸೌಧದಲ್ಲಿ ಈ ರೀತಿ ಘೋಷಣೆ ಬಂದ್ರೆ ನಾವು ಕೈಕಟ್ಟಿ ಕೂರಬೇಕೆ?ʼ ಅಂತ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
-masthmagaa.com
Contact Us for Advertisement