masthmagaa.com:

ಬೇರೆ ಬೇರೆ ಧರ್ಮದವರು ಮದುವೆ ಮಾಡಿಕೊಂಡ್ರೆ ಲವ್ ಜಿಹಾದ್ ಅನ್ನೋದಾದ್ರೆ, ಜಮ್ಮು-ಕಾಶ್ಮೀರದಲ್ಲಿ ಈ ಹಿಂದೆ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಮತ್ತು ಬಿಜೆಪಿ ಮಾಡಿಕೊಂಡ ಮೈತ್ರಿಯನ್ನು ಯಾಕೆ ‘ಸೈದ್ಧಾಂತಿಕ ಲವ್ ಜಿಹಾದ್​’ ಅಂತ ಕರೆಯಲು ಸಾಧ್ಯವಿಲ್ಲ..? ಅಂತ ಶಿವಸೇನೆ ಪ್ರಶ್ನೆ ಮಾಡಿದೆ. ಸಂಘ ಪರಿವಾರ ಮತ್ತು ಮೋದಿ ಹೊರತುಪಡಿಸಿದ ಹಿಂದೂಸ್ತಾನ ನಿರ್ಮಾಣ ಆಗಬೇಕು ಎಂದಿದ್ದ ನಿತೀಶ್ ಕುಮಾರ್ ಈಗ ಆ ವಾದವನ್ನ ಬದಿಗೊತ್ತಿ ಅಧಿಕಾರಕ್ಕಾಗಿ ಬಿಜೆಪಿ ಜೊತೆ ಕೈಜೋಡಿಸಿದ್ದನ್ನ ಲವ್ ಜಿಹಾದ್ ಅಂತ ಕರೆಯಲು ಸಾಧ್ಯವಿಲ್ಲವೇ..? ಲವ್ ಜಿಹಾದ್ ಪದಕ್ಕೆ ಯೋಗಿ ಆದಿತ್ಯನಾಥ್ ಅಥವಾ ಶಿವರಾಜ್​ ಸಿಂಗ್ ಚೌಹಾಣ್ ನೀಡುವ ವ್ಯಾಖ್ಯಾನವನ್ನ ದೇಶ ಒಪ್ಪೋದಿಲ್ಲ ಅಂತ ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಬರೆಯಲಾಗಿದೆ.

ಶಿವಸೇನೆಯ ಈ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್, ‘ಒಂದು ಕಾಲದಲ್ಲಿ ಪ್ರೇಮಿಗಳ ದಿನವನ್ನ ವಿರೋಧಿಸಿದ್ದಕ್ಕಾಗಿ ಮತ್ತು ಪ್ರೀತಿಸುವವರ ಮೇಲೆ ಹಲ್ಲೆ ಮಾಡುತ್ತಿದ್ದಕ್ಕೆ ಶಿವಸೇನೆ ಸುದ್ದಿಯಲ್ಲಿರುತ್ತಿತ್ತು. ಆದ್ರೀಗ ಈ ಪಕ್ಷ ಎಷ್ಟು ಬದಲಾಗಿದೆ ಅನ್ನೋದು ಅವರ ನಡೆಯಿಂದಲೇ ಗೊತ್ತಾಗುತ್ತೆ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement

Leave a Reply