masthmagaa.com:
ಡಿಕೆ ಸುರೇಶ್ ಹೇಳಿಕೆ ಬೆನ್ನಲ್ಲೆ ಮಾಜಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಳ ಜಗಳ ಹೊರ ಬರುತ್ತಿದೆ. ಗ್ಯಾರಂಟಿಯಾಗಿ ಹೇಳುತ್ತೇನೆ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ. ಕರ್ನಾಟಕದಲ್ಲಿ ಅವರಿಬ್ಬರಿಗಿಂತ ಸಿದ್ದರಾಮಯ್ಯ ಪವರ್ ಫುಲ್. ಅಧಿಕಾರ ಹಂಚಿಕೆ ಒಂದು ನಾಟಕ ಅಷ್ಟೇ. ಅದಕ್ಕಾಗಿ ಡಿ.ಕೆ.ಸುರೇಶ್ ರಾಜಕೀಯ ನಿವೃತ್ತಿ ಬಗ್ಗೆ ಮಾತಾಡಿದ್ದಾರೆ ಅಂತ ಹೇಳಿದ್ದಾರೆ. ಅಷ್ಟೇ ಅಲ್ದೇ ಡಿ.ಕೆ.ಶಿವಕುಮಾರ್ ಸಿಎಂ ಆಗಲ್ಲ ಅಂತ ಡಿ.ಕೆ.ಸುರೇಶ್ಗೆ ಗೊತ್ತಾಗಿದೆ. ಕಾಂಗ್ರೆಸ್ ಒಂದು ರೀತಿ ಒಡೆದ ಮನೆ ಆಗಿದೆ. ಶ್ಯಾಡೋ ಮುಖ್ಯಮಂತ್ರಿಯಂತೆ ನಟಿಸಲು ಡಿಕೆ ಶಿವಕುಮಾರ್ ಹೋಗುತ್ತಿದ್ದಾರೆ. ಇನ್ನು 6 ತಿಂಗಳಲ್ಲಿ ಸಿದ್ದರಾಮಯ್ಯ, ಡಿಕೆ ಜಗಳ ಬಹಿರಂಗವಾಗುತ್ತದೆ ಅಂತ ಅಶೋಕ್ ಭವಿಷ್ಯ ನುಡಿದಿದ್ದಾರೆ.
-masthmagaa.com
Contact Us for Advertisement