masthmagaa.com:
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ತನ್ನ ವಿರುದ್ಧ ಇರೋ 5 ಪೊಲೀಸ್ ಕೇಸ್ಗಳ ಬಗ್ಗೆ ಉಲ್ಲೇಖಿಸಿಲ್ಲ ಅಂತ ಬಿಜೆಪಿ ದೂರು ನೀಡಿದೆ. ಅಂದಹಾಗೆ ಮಮತಾ ಬ್ಯಾನರ್ಜಿ ಭಬಾನಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಇದೇ ಸೆಪ್ಟೆಂಬರ್ 30ರಂದು ಚುನಾವಣೆ ನಡೆಯಲಿದೆ. ಮತ್ತೊಂದ್ಕಡೆ ನಾರ್ಥ್ 24 ಪರಗಣದ ಜಗದ್ದಲ್ನಲ್ಲಿ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಮನೆ ಮುಂದೆ ಬಾಂಬ್ ಎಸೆಯಲಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಸ್ಫೋಟಕ ನಿಷ್ಕ್ರಿಯದಳ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅರ್ಜುನ್ ಸಿಂಗ್, 2ನೇ ಬಾರಿಗೆ ಹೀಗಾಗ್ತಿದೆ. ಇನ್ನು ನಾರದ ಸ್ಟಿಂಗ್ ಪ್ರಕರಣದ ತನಿಖೆ ನಡೆಸ್ತಿರೋ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳಿಗೆ ಪಶ್ಚಿಮ ಬಂಗಾಳ ಸ್ಪೀಕರ್ ಬಿಮನ್ ಬ್ಯಾನರ್ಜಿ ನೋಟಿಸ್ ಕೊಟ್ಟಿದ್ದಾರೆ. ಸೆಪ್ಟೆಂಬರ್ 22ಕ್ಕೂ ಮುನ್ನ ತಮ್ಮ ಮುಂದೆ ಬರುವಂತೆ ಸೂಚಿಸಿದ್ದಾರೆ.
-masthmagaa.com
Contact Us for Advertisement