ದ್ವೇಷಕಾರಕ ಟ್ವೀಟ್:‌ BSP ಸಂಯೋಜಕ ಸ್ಥಾನದಿಂದ ಆನಂದ್‌ ಔಟ್!

masthmagaa.com:

ಮೂರನೇ ಹಂತ ಚುನಾವಣೆ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ BSP ನಾಯಕಿ ಮಾಯಾವತಿ ಅಚ್ಚರಿಯ ನಿರ್ಧಾರ ತಗೊಂಡಿದ್ದಾರೆ. ಕಳೆದ ವರ್ಷ ತಮ್ಮ ಸೋದರಳಿಯ ಆಕಾಶ್‌ ಆನಂದ್‌ರನ್ನ ಪಕ್ಷದ ಉತ್ತರಾಧಿಕಾರಿ ಅಂತ ಅವರು ಅನೌನ್ಸ್‌ ಮಾಡಿದ್ರು. ಆದ್ರೆ ಈಗ ಪಕ್ಷದ ರಾಷ್ಟ್ರೀಯ ಸಂಯೋಜಕ ಸ್ಥಾನದಿಂದ ಆಕಾಶ್‌ರನ್ನ ಕೆಳಗಿಳಿಸಿದ್ದಾರೆ. ಕಳೆದ ವಾರವಷ್ಟೇ ದ್ವೇಶಕಾರುವ ಟ್ವೀಟ್‌ ಮಾಡಿದ್ದಕ್ಕಾಗಿ ಆಕಾಶ್‌ ಆನಂದ್‌ ವಿರುದ್ಧ ಕೇಸ್‌ ದಾಖಲಾಗಿತ್ತು. ಇದಾದ 10 ದಿನಗಳಲ್ಲಿ ಮಾಯಾವತಿ ಈ ನಿರ್ಧಾರ ತಗೊಂಡಿದ್ದಾರೆ. ಆಕಾಶ್‌ಗೆ ರಾಜಕೀಯ ಪ್ರಭುದ್ಧತೆ ಬರೋವರೆಗೆ, ಹಾಗೂ ಪಕ್ಷದ ಹಿತಾಸಕ್ತಿಗಾಗಿ ಈ ಕ್ರಮ ಕೈಗೊಂಡಿದ್ದೀವಿ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply