ಸಿಎಎ & ಎನ್​ಆರ್​ಸಿಯಿಂದ ಮುಸ್ಲಿಮರಿಗೆ ಸಮಸ್ಯೆ ಆಗಲ್ಲ: ಮೋಹನ್ ಭಾಗವತ್​​

masthmagaa.com:

ಸಿಎಎ ಮತ್ತು ಎನ್​ಆರ್​ಸಿಯನ್ನ ದೇಶದ ಯಾವ ಪ್ರಜೆ ವಿರುದ್ಧವೂ ರೂಪಿಸಿದ್ದಲ್ಲ. ಭಾರತದಲ್ಲಿರೋ ಮುಸ್ಲಿಮರಿಗೆ ಸಿಎಎಯಿಂದ ಏನೂ ಸಮಸ್ಯೆ​ ಆಗಲ್ಲ ಅಂತ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಬಳಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲಾಗುತ್ತೆ ಅನ್ನೋ ಭರವಸೆ ಕೊಡಲಾಗಿತ್ತು. ಅದನ್ನ ಭಾರತ ಮಾಡ್ತಿದೆ, ಆದ್ರೆ ಪಾಕಿಸ್ತಾನ ಮಾಡ್ತಿಲ್ಲ. ಪ್ರಜಾಪ್ರಭುತ್ವ, ಜಾತ್ಯಾತೀತತೆ ಮತ್ತು ಸಮಾಜವಾದವನ್ನ ನಾವು ಬೇರೆ ದೇಶದಿಂ ಕಲಿಯೋ ಅಗತ್ಯವಿಲ್ಲ. ಅವು ನಮ್ಮ ರಕ್ತದಲ್ಲೇ ಇದೆ ಅಂತ ಮೋಹನ್ ಭಾಗವತ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply