masthmagaa.com:
ನೀಲಿಚಿತ್ರ ಕೇಸಲ್ಲಿ ತನ್ನನ್ನು ಅರೆಸ್ಟ್ ಮಾಡಿರೋದನ್ನು ಪ್ರಶ್ನಿಸಿ ಶಿಲ್ಪಾ ಶೆಟ್ಟಿ ಗಂಡ ರಾಜ್ ಕುಂದ್ರಾ ಸಲ್ಲಿಸಿದ್ದ ಅರ್ಜಿ ಇವತ್ತು ಬಾಂಬೆ ಹೈಕೋರ್ಟ್ನಲ್ಲಿ ವಿಚಾರಣೆ ನಡೀತು. ಮುಂಬೈ ಪೊಲೀಸ್ ಪರ ವಾದ ಮಂಡಿಸಿದ ವಕೀಲರು, ಆರೋಪಿಗಳು ತನಿಖೆಗೆ ಸಹಕರಿಸದೇ ಇದ್ರೆ, ಸಾಕ್ಷ್ಯಗಳನ್ನು ನಾಶಪಡಿಸೋಕೆ ಯತ್ನಿಸಿದ್ರೆ ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ. ರಾಜ್ ಕುಂದ್ರಾ ಐಕ್ಲೌಡ್ ಅಕೌಂಟ್ನಲ್ಲಿದ್ದ 61 ವಿಡಿಯೋಗಳನ್ನು ನಾಶಪಡಿಸಿದ್ದಾರೆ. ಆದ್ರೂ ಕೂಡ ನಮಗೆ ಅವರ ಲ್ಯಾಪ್ಟಾಪ್ನಲ್ಲಿ 61 ನೀಲಿಚಿತ್ರಗಳು ಮತ್ತು ಅಡಲ್ಟ್ ಕಂಟೆಂಟ್ ಇರೋ ಸ್ಕ್ರಿಪ್ಟ್ಗಳು ಸಿಕ್ಕಿವೆ. ಹಾಟ್ಶಾಟ್ ಮೊಬೈಲ್ ಆ್ಯಪ್ ಮಾರ್ಕೆಟಿಂಗ್ ಸ್ಟ್ರಾಟಜಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಉಳಿದ ಆರೋಪಿಗಳ ಜೊತೆಗೆ ಚರ್ಚಿಸಿರೋ ಒಂದು ವಾಟ್ಸಾಪ್ ಗ್ರೂಪ್ ಕೂಡ ಪತ್ತೆಯಾಗಿದೆ. ಇದೇ ವೇಳೆ ಮಾತನಾಡಿದ ರಾಜ್ ಕುಂದ್ರಾ ಪರ ವಕೀಲರು, ಹಾರ್ಡ್ಡಿಸ್ಕ್, ಲ್ಯಾಪ್ಟಾಪ್, ಮೊಬೈಲ್ ಫೋನ್ ಎಲ್ಲವೂ ಪೊಲೀಸರ ಬಳಿಯೇ ಇದೆ. ಹೀಗಿರುವಾಗ ಅದನ್ನು ಡಿಲೀಟ್ ಮಾಡಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿದ್ರು. ವಾದ ಪ್ರತಿವಾದ ಆಲಿಸಿದ ಬಾಂಬೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.
ಇನ್ನು ತನ್ನ ಗಂಡನ ಅರೆಸ್ಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರೋ ಶಿಲ್ಪಾ ಶೆಟ್ಟಿ, ಗಾಳಿಸುದ್ದಿ, ಕಟ್ಟು ಕಥೆ ಮತ್ತು ಆರೋಪಗಳಿಗೆಲ್ಲಾ ಉತ್ತರಿಸಲ್ಲ. ನಮಗೆ ಮಾಧ್ಯಮಗಳ ವಿಚಾರಣೆಯ ಅಗತ್ಯವಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳಲು ಅವಕಾಶ ಮಾಡ್ಕೊಡಿ. ಸತ್ಯಮೇವ ಜಯತೆ ಅಂತ ಬರೆದುಕೊಂಡಿದ್ದಾರೆ.
-masthmagaa.com
Contact Us for Advertisement