ಹಿಂದೂ, ಭಾರತ ಮಾತೆಗೆ ಅವಮಾನಿಸಿದ ಪಾದ್ರಿ ಅಂದರ್!

masthmagaa.com:

ಹಿಂದೂಗಳು, ಭಾರತ ಮಾತೆ, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ತಮಿಳುನಾಡಿನ ಸ್ಟಾಲಿನ್ ಸರ್ಕಾರದ ಮೇಲೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದಲ್ಲಿ ಜಾರ್ಜ್ ಪೊನ್ನೈಯ್ಯಾ ಅನ್ನೋ ಪಾದ್ರಿಯನ್ನ ಬಂಧಿಸಲಾಗಿದೆ. ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಸೇರಿಕೊಂಡು ಒಂದು ಸಭೆ ಆಯೋಜನೆ ಮಾಡಿದ್ರು. ಇದರಲ್ಲಿ ಉಗ್ರ ಭಾಷಣ ಮಾಡಿದ ಜಾರ್ಜ್ ಪೊನ್ನೈಯ್ಯಾ ನಿರಂತರ ಆಕ್ಷೇಪಾರ್ಹ ಶಬ್ದಗಳನ್ನ ಬಳಸಿದ್ದರು ಅನ್ನೋದು ಆರೋಪ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರವನ್ನೂ ಬಿಡದ ಜಾರ್ಜ್, ‘ನಿಮಗೆ ಓಟ್ ಹಾಕಿ ಅಧಿಕಾರಕ್ಕೆ ತಂದಿದ್ದು ಹಿಂದೂಗಳಲ್ಲ. ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮರು. ಇದನ್ನ ಮರೆತರೆ ಸರಿ ಇರಲ್ಲ’ ಅಂತ ಧಮಕಿ ಹಾಕಿದ್ದಾರೆ ಅಂತ ವರದಿಯಾಗಿದೆ. ತಮ್ಮ ಭಾಷಣ ವಿವಾದವಾಗ್ತಿದ್ದಂತೆ ಹೇಳಿಕೆ ವಾಪಾಸ್ ಪಡೀತೀನಿ ಅಂದಿದ್ರು. ಆದ್ರೆ ತಮಿಳುನಾಡಿನಾದ್ಯಂತ ಇವ್ರ ವಿರುದ್ಧ ಅನೇಕ ಕಂಪ್ಲೇಂಟ್ ದಾಖಲಾಗಿ, ಬಂಧನ ಆಗ್ರಹ ಕೇಳಿ ಬಂದ್ವು. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅಂತೂ ರಾಜ್ಯವ್ಯಾಪಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ರು. ವಿಚಾರ ಗಂಭೀರ ಆಗ್ತಿರೋದು ಅರಿತ ಮದುರೈ ಪೊಲೀಸರು ಕಡೆಗೂ ಈ ಉಗ್ರ ಭಾಷಣಕಾರ ಪಾದ್ರಿಯನ್ನ ಹಿಡದು ವಿಚಾರಣೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply