masthmagaa.com:
ಕೆಲ ಸಚಿವರ ಖಾತೆ ಮರು ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನವನ್ನ ಶಮನಗೊಳಿಸುವ ಉದ್ದೇಶದಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಇದೀಗ ಮೂವರು ಸಚಿವರ ಖಾತೆಯನ್ನ ಮತ್ತೊಮ್ಮೆ ಬದಲಾವಣೆ ಮಾಡಿದ್ದಾರೆ. ಡಾ. ಕೆ. ಸುಧಾಕರ್ರಿಂದ ಕಿತ್ತುಕೊಂಡಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮತ್ತೆ ಅವರಿಗೇನೆ ನೀಡಲಾಗಿದೆ. ಕೊರೋನಾ ನಿರ್ವಹಣೆ ಮಾಡಲು ಆರೋಗ್ಯ ಖಾತೆ ಜೊತೆಗೆ ವೈದ್ಯಕೀಯ ಖಾತೆಯೂ ಅಗತ್ಯ ಅನ್ನೋದನ್ನ ಮನಗಂಡು ಈ ರೀತಿ ಮಾಡಲಾಗಿದೆ ಎನ್ನಲಾಗ್ತಿದೆ. ಇನ್ನು ಮಾಧುಸ್ವಾಮಿಯಿಂದ ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ್ ಖಾತೆಯನ್ನ ವಾಪಸ್ ಪಡೆದಿದ್ದು ಅವರಿಗೀಗ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ನೀಡಲಾಗಿದೆ. ಇನ್ನು ಆನಂದ್ ಸಿಂಗ್ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ವಾಪಸ್ ಪಡೆದಿರೋದ್ರಿಂದ ಅವರಿಗೆ ಸಿಎಂ ಬಳಿ ಇದ್ದ ಮೂಲಸೌಕರ್ಯ ಮತ್ತು ಮಾಧುಸ್ವಾಮಿ ಬಳಿ ಇದ್ದ ಹಜ್ ಮತ್ತು ವಕ್ಫ್ ಖಾತೆಯನ್ನ ನೀಡಲಾಗಿದೆ. ಎರಡೆರಡು ಬಾರಿ ಖಾತೆ ಬದಲಾವಣೆಯಿಂದ ಆನಂದ್ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದಾರೆ. ನಂಗೆ ಸಚಿವ ಸ್ಥಾನವೇ ಬೇಡ ಅಂತಿದ್ದಾರೆ ಎನ್ನಲಾಗ್ತಿದೆ. ಮಾಧುಸ್ವಾಮಿ ಕೂಡ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ.
-masthmagaa.com
Contact Us for Advertisement