ಖಾತೆ ಕ್ಯಾತೆ: ಮತ್ತೆ ಮೂವರು ಸಚಿವರ ಖಾತೆ ಬದಲಿಸಿದ ಸಿಎಂ

masthmagaa.com:

ಕೆಲ ಸಚಿವರ ಖಾತೆ ಮರು ಹಂಚಿಕೆಯಿಂದ ಉಂಟಾಗಿರುವ ಅಸಮಾಧಾನವನ್ನ ಶಮನಗೊಳಿಸುವ ಉದ್ದೇಶದಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಇದೀಗ ಮೂವರು ಸಚಿವರ ಖಾತೆಯನ್ನ ಮತ್ತೊಮ್ಮೆ ಬದಲಾವಣೆ ಮಾಡಿದ್ದಾರೆ. ಡಾ. ಕೆ. ಸುಧಾಕರ್​ರಿಂದ ಕಿತ್ತುಕೊಂಡಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನ ಮತ್ತೆ ಅವರಿಗೇನೆ ನೀಡಲಾಗಿದೆ. ಕೊರೋನಾ ನಿರ್ವಹಣೆ ಮಾಡಲು ಆರೋಗ್ಯ ಖಾತೆ ಜೊತೆಗೆ ವೈದ್ಯಕೀಯ ಖಾತೆಯೂ ಅಗತ್ಯ ಅನ್ನೋದನ್ನ ಮನಗಂಡು ಈ ರೀತಿ ಮಾಡಲಾಗಿದೆ ಎನ್ನಲಾಗ್ತಿದೆ. ಇನ್ನು ಮಾಧುಸ್ವಾಮಿಯಿಂದ ವೈದ್ಯಕೀಯ ಶಿಕ್ಷಣ, ಹಜ್ ಮತ್ತು ವಕ್ಫ್​ ಖಾತೆಯನ್ನ ವಾಪಸ್ ಪಡೆದಿದ್ದು ಅವರಿಗೀಗ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ನೀಡಲಾಗಿದೆ. ಇನ್ನು ಆನಂದ್​ ಸಿಂಗ್​ರಿಂದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ವಾಪಸ್ ಪಡೆದಿರೋದ್ರಿಂದ ಅವರಿಗೆ ಸಿಎಂ ಬಳಿ ಇದ್ದ ಮೂಲಸೌಕರ್ಯ ಮತ್ತು ಮಾಧುಸ್ವಾಮಿ ಬಳಿ ಇದ್ದ ಹಜ್ ಮತ್ತು ವಕ್ಫ್​ ಖಾತೆಯನ್ನ ನೀಡಲಾಗಿದೆ. ಎರಡೆರಡು ಬಾರಿ ಖಾತೆ ಬದಲಾವಣೆಯಿಂದ ಆನಂದ್​ ಸಿಂಗ್ ತೀವ್ರ ಅಸಮಾಧಾನಗೊಂಡಿದ್ದಾರೆ. ನಂಗೆ ಸಚಿವ ಸ್ಥಾನವೇ ಬೇಡ ಅಂತಿದ್ದಾರೆ ಎನ್ನಲಾಗ್ತಿದೆ. ಮಾಧುಸ್ವಾಮಿ ಕೂಡ ಬೇಸರಗೊಂಡಿದ್ದಾರೆ ಎನ್ನಲಾಗ್ತಿದೆ.

-masthmagaa.com

Contact Us for Advertisement

Leave a Reply