masthmagaa.com:
ಭೋಪಾಲ್: ಮಧ್ಯಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಮೇಜರ್ ಸರ್ಜರಿ ಮಾಡಲು ಹೋಗಿ ಕಾಂಗ್ರೆಸ್ ಪೇಚಿಗೆ ಸಿಲುಕಿದೆ. ಮಧ್ಯಪ್ರದೇಶದಲ್ಲಿ ನಾಯಕತ್ವದ ಬದಲಾವಣೆ ವೇಳೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಬಿಜೆಪಿ ನಾಯಕನಿಗೆ ನೀಡಿದೆ. ನಂತರ ಆಯ್ಕೆಯನ್ನು ರದ್ದುಗೊಳಿಸಿದೆ. ಆದ್ರೂ ಕೂಡ ಬೇರೆ ಪಕ್ಷಗಳ ನಾಯಕರಿಂದ ಭಾರಿ ವ್ಯಂಗ್ಯಕ್ಕೆ ಗುರಿಯಾಗಿದೆ.
ಹರ್ಷಿತ್ ಸಿಂಘೈ ಎಂಬುವವರು ಮಾರ್ಚ್ ತಿಂಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೆಲ ನಾಯಕರ ಜೊತೆ ಕಾಂಗ್ರೆಸ್ ಬಿಟ್ಟಿದ್ದರು. ನಂತರದಲ್ಲಿ ಬಿಜೆಪಿ ಸೇರಿದ್ದರು. ಆದ್ರೀಗ ಅವರಿಗೆ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಕ್ಕೆ ಶುಭಾಶಯಗಳು ಅಂತ ಸಂದೇಶ ಬಂದಿದ್ದು ಶಾಕ್ ಆಗಿದ್ಧಾರೆ.
ಅಂದ್ರೆ ಕಾಂಗ್ರೆಸ್ನಲ್ಲಿ ಒಂದು ರಾಜ್ಯದ ಯುವ ಕಾಂಗ್ರೆಸ್ ಕಾರ್ಯದರ್ಶಿ ರಾಜೀನಾಮೆ ನೀಡಿರುವುದರ ಬಗ್ಗೆಯೇ ರೆಕಾರ್ಡ್ನಲ್ಲಿ ಅಪ್ಡೇಟ್ ಆಗಿಲ್ಲ ಅಂತ ಆಯ್ತು. ಹರ್ಷಿತ್ ಸಿಂಘೈ ಅವರ ಆಯ್ಕೆಗೆ ಕಳೆದ ಶುಕ್ರವಾರ ಚುನಾವಣೆ ಕೂಡ ನಡೆದಿತ್ತು. ಅದ್ರಲ್ಲಿ 12 ಮತಗಳಿಂದ ಹರ್ಷಿತ್ ಸಿಂಘೈ ಗೆದ್ದಿದ್ದರು.
-masthmagaa.com
Contact Us for Advertisement