masthmagaa.com:
ಸಂಘರ್ಷ ಪೀಡಿತ ಸುಡಾನ್ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನ ಸುರಕ್ಷಿತವಾಗಿ ಕರೆ ತರಲು ಕೇಂದ್ರಕ್ಕೆ ಮನವಿ ಮಾಡಿರೊ ಸಿದ್ದರಾಮಯ್ಯ ಅವರ ಟ್ವೀಟ್ಗೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದನ್ನ ರಾಜಕೀಯಗೊಳಿಸಬೇಡಿ ಎಂದಿದ್ದಾರೆ. ʻನಿಮ್ಮ ಟ್ವೀಟ್ನ್ನ ನೋಡಿ ಆಶ್ಚರ್ಯವಾಗಿದೆ. ಸುಡಾನ್ನಲ್ಲಿ ಜೀವಗಳು ಅಪಾಯದಲ್ಲಿವೆ. ದಯವಿಟ್ಟು ಈ ವಿಷಯದಲ್ಲಿ ರಾಜಕೀಯ ಮಾಡಬೇಡಿʼ ಅಂತ ಹೇಳಿದ್ದಾರೆ. ಜೊತೆಗೆ ಭಾರತದ ರಾಯಭಾರ ಕಚೇರಿ ಸುಡಾನ್ನಲ್ಲಿರೊ ಭಾರತೀಯ ಪ್ರಜೆಗಳ ಜೊತೆ ಸಂಪರ್ಕದಲ್ಲಿದೆ ಅಂತ ಮಾಹಿತಿ ನೀಡಿದ್ದಾರೆ. ಜೈಶಂಕರ್ ಟ್ವೀಟ್ಗೆ ಪ್ರತಿಕ್ರಿಯಿಸಿರೊ ಸಿದ್ದರಾಮಯ್ಯ, ನೀವು ವಿದೇಶಾಂಗ ಸಚಿವರು ಆಗಿರೋದ್ರಿಂದ ನಿಮ್ಮ ಸಹಾಯಕ್ಕಾಗಿ ಮನವಿ ಮಾಡಿದ್ದೇನೆ. ಆದ್ರೆ ನೀವು ಆಶ್ಚರ್ಯಗೊಳ್ಳೊದ್ರಲ್ಲಿ ಬ್ಯುಸಿ ಆಗಿದ್ರೆ, ನಮ್ಮ ಜನರನ್ನ ಮರಳಿ ಕರೆತರಲು ಸಹಾಯ ಮಾಡುವ ವ್ಯಕ್ತಿಯ ಸಂಪರ್ಕ ಮಾಡಿಕೊಡಿ ಅಂತ ತಿರುಗೇಟು ನೀಡಿದ್ದಾರೆ
-masthmagaa.com
Contact Us for Advertisement