masthmagaa.com:
ದೇಶದಲ್ಲಿ ಪೊಲೀಸರು ಆಡಳಿತಾರೂಢ ಪಕ್ಷಗಳಿಗೆ ಸಪೋರ್ಟ್ ಮಾಡ್ತಿರೋದನ್ನ ಸುಪ್ರೀಂಕೋರ್ಟ್ ಟೀಕಿಸಿದೆ. ಅಧಿಕಾರದಲ್ಲಿರೋ ರಾಜಕೀಯ ಪಕ್ಷಗಳಿಗೆ ಒಳ್ಳೆಯವರಾಗೋ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳು ವಿಪಕ್ಷ ನಾಯಕರಿಗೆ ಕಿರುಕುಳ ಕೊಡ್ತಿದ್ದಾರೆ. ಆದ್ರೆ ಅದು ಸರಿಯಲ್ಲ. ಪೊಲೀಸರು ಕಾನೂನಿನಿಗೆ ಬದ್ಧವಾಗಿರಬೇಕು ಅಂತ ಸುಪ್ರೀಂಕೋರ್ಟ್ ಸಿಜೆ ಎನ್ವಿ ರಮಣ ಆಗ್ರಹಿಸಿದ್ದಾರೆ. ಅಂದಹಾಗೆ ಛತ್ತೀಸ್ಗಡ ಸರ್ಕಾರ ಐಪಿಎಸ್ ಅಧಿಕಾರಿ ಗಜೇಂದ್ರ ಪಾಲ್ ಸಿಂಗ್ ಅವರ ಮೇಲೆ ಅಕ್ರಮ ಆಸ್ತಿ ಗಳಿಕೆ, ಭಷ್ಟಾಚಾರ ಆರೋಪ ಹೊರಿಸಿದೆ. ಸಸ್ಪೆಂಡ್ ಮಾಡಿ, ದೇಶದ್ರೋಹ ಕೇಸ್ ಕೂಡ ಹಾಕಿದೆ. ಈ ಹಿಂದೆ ನಾನು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹತ್ತಿರವಾಗಿದ್ರಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ನನಗೆ ಹೀಗೆ ಮಾಡ್ತಿದೆ ಅಂತ ಗಜೇಂದ್ರ ಪಾಲ್ ಸಿಂಗ್ ಆರೋಪಿಸಿದ್ರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಗಜೇಂದ್ರ ಪಾಲ್ ಸಿಂಗ್ರನ್ನು ಬಂಧಿಸದಂತೆ ಸೂಚಿಸಿ, ಪೊಲೀಸರಿಗೂ ಈ ಮೇಲಿನ ಕಠಿಣ ಸಂದೇಶ ನೀಡಿದೆ.
-masthmagaa.com
Contact Us for Advertisement