masthmagaa.com:
ದೇಶದಲ್ಲಿ ಕೋಮುಕಲಹ, ದ್ವೇಷರಾಜಕಾರಣ ಹೆಚ್ಚಾಗ್ತಾ ಇದೆ ಅಂತ ಮಾಜಿ ಅಧಿಕಾರಿಗಳ ಗುಂಪೊಂದು ಪ್ರಧಾನಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಈಗ ಅದಕ್ಕೆ ಕೌಂಟರ್ ಕೊಡಲು ಮತ್ತೊಂದು ಗುಂಪು ಮತ್ತೊಂದು ಪತ್ರವನ್ನ ಬರೆದಿದೆ. Concerned Citizens ಅನ್ನೋ ಹೆಸರಿನಲ್ಲಿ ಈ ಪತ್ರ ಪ್ರಕಟ ಆಗಿದ್ದು ಮೋದಿ ಸರ್ಕಾರವನ್ನ ಸಮರ್ಥನೆ ಮಾಡಿಕೊಳ್ಳಲಾಗಿದೆ. ಇದ್ರಲ್ಲಿ ಸುಮಾರು 200 ಜನ ಮಾಜಿ ನ್ಯಾಯಾಧೀಶರು, ಮಾಜಿ ಅಧಿಕಾರಿಗಳು ಮತ್ತು ಮಾಜಿ ಸೇನಾಧಿಕಾರಿಗಳು ಪತ್ರಕ್ಕೆ ಸಹಿ ಮಾಡಿದ್ದಾರೆ. ಇನ್ನು ಪತ್ರದಲ್ಲಿ, ಈ ಹಿಂದೆ ಪತ್ರ ಬರೆದ ಗುಂಪು ಜನರ ದಿಕ್ಕು ತಪ್ಪಿಸ್ತಾ ಇದೆ. ಎಲ್ಲೋ ಒಂದೆರಡು ಕಡೆ ಆದ ಕೋಮು ಸಂಘರ್ಷಗಳನ್ನ ಇಡೀ ದೇಶದಲ್ಲಿ ಆಗಿದೆ ಅಂತ ಹೇಳಲಾಗ್ತಾ ಇದೆ. ಹಾಗೆ ನೋಡಿದ್ರೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೋಮುಗಲಭೆಗಳು ಕಡಿಮೆ ಆಗಿವೆ ಅಂತ ಬರೆದಿದ್ದಾರೆ.
-masthmagaa.com
Contact Us for Advertisement