ದೆಹಲಿಯ ಕತ್ತು ಹಿಸುಕುತ್ತಿದ್ದೀರಿ: ರೈತರ ವಿರುದ್ಧ ಸುಪ್ರೀಂಕೋರ್ಟ್​ ಸಿಡಿಮಿಡಿ

masthmagaa.com:

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್​​ ಕೆಂಡಕಾರಿದೆ. ಕಿಸಾನ್ ಮಹಾಪಂಚಾಯತ್​, ಜಂತರ್​ಮಂತರ್​ನಲ್ಲಿ ಸತ್ಯಾಗ್ರಹಕ್ಕಾಗಿ ಅನುಮತಿ ಕೋರಿತ್ತು. ಒಂದ್ 200 ಮಂದಿ ರೈತರಾದ್ರೂ ಸೇರೋಕೆ ಅವಕಾಶ ಕೊಡಿ ಅಂತ ಕೂಡ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ಕೋರ್ಟ್​, ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳನ್ನು ಬ್ಲಾಕ್ ಮಾಡಿ, ಇಡೀ ದೆಹಲಿಯ ಕತ್ತು ಹಿಸುಕಿದ್ದೀರಿ. ಈಗ ನಗರದ ಒಳಗೂ ಬರೋಕೆ ಅವಕಾಶ ಕೇಳ್ತಿದ್ದೀರಿ. ನಿಮ್ಮ ಪ್ರತಿಭಟನೆಯಿಂದ ಜನ ಏನ್ ಖುಷಿಯಾಗಿದ್ದಾರಾ..? ಇದು ಈಗಿಂದೀಗಲೇ ನಿಲ್ಲಬೇಕು ಅಂತ ಚಾಟಿ ಬೀಸಿದೆ.

-masthmagaa.com

Contact Us for Advertisement

Leave a Reply