masthmagaa.com:
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ರೈತರ ವಿರುದ್ಧ ಸುಪ್ರೀಂಕೋರ್ಟ್ ಕೆಂಡಕಾರಿದೆ. ಕಿಸಾನ್ ಮಹಾಪಂಚಾಯತ್, ಜಂತರ್ಮಂತರ್ನಲ್ಲಿ ಸತ್ಯಾಗ್ರಹಕ್ಕಾಗಿ ಅನುಮತಿ ಕೋರಿತ್ತು. ಒಂದ್ 200 ಮಂದಿ ರೈತರಾದ್ರೂ ಸೇರೋಕೆ ಅವಕಾಶ ಕೊಡಿ ಅಂತ ಕೂಡ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ಕೋರ್ಟ್, ಈಗಾಗಲೇ ರಾಷ್ಟ್ರೀಯ ಹೆದ್ದಾರಿಗಳನ್ನು ಬ್ಲಾಕ್ ಮಾಡಿ, ಇಡೀ ದೆಹಲಿಯ ಕತ್ತು ಹಿಸುಕಿದ್ದೀರಿ. ಈಗ ನಗರದ ಒಳಗೂ ಬರೋಕೆ ಅವಕಾಶ ಕೇಳ್ತಿದ್ದೀರಿ. ನಿಮ್ಮ ಪ್ರತಿಭಟನೆಯಿಂದ ಜನ ಏನ್ ಖುಷಿಯಾಗಿದ್ದಾರಾ..? ಇದು ಈಗಿಂದೀಗಲೇ ನಿಲ್ಲಬೇಕು ಅಂತ ಚಾಟಿ ಬೀಸಿದೆ.
-masthmagaa.com
Contact Us for Advertisement