masthmagaa.com:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ಗೆ ಗುಂಡಿಟ್ಟು ಕೊಲ್ಲೋದಾಗಿ ಬೆದರಿಕೆ ಹಾಕಿದ್ದ ಎಎಸ್ಐ ಒಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಪ್ರಿಲ್ 24ರಂದು ಎಎಸ್ಐ ತನ್ವೀರ್ ಖಾನ್, ಫೇಸ್ಬುಕ್ನಲ್ಲಿ ರಂಜಾನ್ನ ಆಜಾನ್ ವಿಚಾರವಾಗಿ ಒಂದು ಪೋಸ್ಟ್ ಮಾಡಿದ್ದ.. ಅದರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಗುಂಡು ಹಾರಿಸೋದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಗಾಜೀಪುರದ ದಿಲ್ದಾರ್ನಗರ ಮೂಲದ ತನ್ವೀರ್, ಬಿಹಾರದ ನಳಂದಾದಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಂತರ ಬಿಹಾರಕ್ಕೆ ತೆರಳಿದ ಪೊಲೀಸರು, ಆರೋಪಿ ಎಎಸ್ಐ ತನ್ವೀರ್ ಖಾನ್ನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.
-masthmagaa.com
Contact Us for Advertisement