ಯೋಗಿ ಆದಿತ್ಯನಾಥ್​​​​ಗೆ ಗುಂಡು ಹಾರಿಸುತ್ತೇನೆ ಎಂದ ಎಎಸ್​​ಐ ಅರೆಸ್ಟ್​​..!

masthmagaa.com:

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​​​​​ಗೆ ಗುಂಡಿಟ್ಟು ಕೊಲ್ಲೋದಾಗಿ ಬೆದರಿಕೆ ಹಾಕಿದ್ದ ಎಎಸ್​​ಐ ಒಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಪ್ರಿಲ್ 24ರಂದು ಎಎಸ್​ಐ ತನ್ವೀರ್ ಖಾನ್, ಫೇಸ್​ಬುಕ್​ನಲ್ಲಿ ರಂಜಾನ್​​ನ ಆಜಾನ್​ ವಿಚಾರವಾಗಿ ಒಂದು ಪೋಸ್ಟ್ ಮಾಡಿದ್ದ.. ಅದರಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಗುಂಡು ಹಾರಿಸೋದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಗಾಜೀಪುರದ ದಿಲ್​ದಾರ್​ನಗರ ಮೂಲದ ತನ್ವೀರ್​​​, ಬಿಹಾರದ ನಳಂದಾದಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ನಂತರ ಬಿಹಾರಕ್ಕೆ ತೆರಳಿದ ಪೊಲೀಸರು, ಆರೋಪಿ ಎಎಸ್​ಐ ತನ್ವೀರ್ ಖಾನ್​​ನನ್ನು ಅರೆಸ್ಟ್ ಮಾಡಿ ಜೈಲಿಗೆ ಅಟ್ಟಿದ್ದಾರೆ.

-masthmagaa.com

Contact Us for Advertisement

Leave a Reply