ಹರಿಯಾಣ ಬಿಜೆಪಿ ಸರ್ಕಾರ ಸಂಕಷ್ಟದಲ್ಲಿದ್ದು, ಬಿಜೆಪಿಗೆ ಭಾರಿ ಹಿನ್ನೆಡೆಯಾಗಿದೆ. ಅಲ್ಲದೆ 75ರ ಗಡಿ ದಾಟೋದಾಗಿ ಘೋಷಿಸಿದ್ದ ಬಿಜೆಪಿಗೆ ಭಾರಿ ನಿರಾಸೆಯಾಗಿದೆ. ಜಾಟರ ನಾಯಕ, ಹರಿಯಾಣ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ ಅವರಿಗೆ ಚುಣಾವಣೆಯಲ್ಲಿ ಜಾಟ್ ಸಮುದಾಯದ ಮತ ಸೆಳೆಯೋ ಜವಾಬ್ದಾರಿ ವಹಿಸಲಾಗಿತ್ತು. ಆದ್ರೆ ಅವರು ಸ್ವತಃ ಟೊಹ್ನಾ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇದಾದ ಬಳಿಕ ಸುಭಾಷ್ ಬರಾಲಾ ಅವರಿಗೆ ಕರೆ ಮಾಡಿರುವ ಅಮಿತ್ ಶಾ ಸರಿಯಾಗಿ ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ಬೇಸತ್ತ ಸುಭಾಷ್, ರಾಜ್ಯಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
Contact Us for Advertisement2019-10-24