“ಮದುವೆ, ಸಂಸಾರ ಎಲ್ಲಾ ಗೋಳು ಅದಕ್ಕೆ ಬ್ರಹ್ಮಚಾರಿಯಾಗಿದ್ದೇನೆ” :ಹಿರಿಯ ನಟ ದತ್ತಣ್ಣ

masthmagaa.com:

ಕನ್ನಡ ಚಿತ್ರರಂಗದ ಹಿರಿಯ ನಟ ದತ್ತಣ್ಣ ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5ರಲ್ಲಿ 4ನೇ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ 45ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟರು. ಇವರು ಸಿನಿಮಾ ರಂಗಕ್ಕೆ ಬರೋದಕ್ಕಿಂತ ಮೊದಲು ಏರ್‌ಫೊರ್ಸ್‌ನಲ್ಲಿ ವಿಂಗ್‌ ಕಮಾಂಡರ್‌ ಆಗಿ ಕೆಲಸ ನಿರ್ವಹಿಸಿದ್ದರು. ಚಂಡೀಗಢ, ದೆಹಲಿ, ಅಂಡಮಾನ್‌ ಮುಂತಾದ ಕಡೆ ಕೆಲಸ ಮಾಡಿದ್ದಾರೆ. 80ವರ್ಷ ವಯಸ್ಸಿನ ದತ್ತಣ್ಣ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಅವರ ಸ್ನೇಹಿತರು ತಿಳಿಸಿದ್ದಾರೆ.

ವೀಕೆಂಡ್‌ ವಿತ್‌ ರಮೇಶ್‌ ಸೀಸನ್‌ 5ರಲ್ಲಿ ಮಾತನಾಡಿದ ದತ್ತಣ್ಣ ತಮ್ಮ ಬಾಲ್ಯ, ಫ್ರೆಂಡ್ಸ್‌, ಕೆಲಸ, ಸಿನಿ ಜರ್ನಿ ಎಲ್ಲದರ ಬಗ್ಗೆಯೂ ಹಂಚಿಕೊಂಡಿದ್ದಾರೆ.
ತಮ್ಮ45ನೇ ವರ್ಷಕ್ಕೆ ಹಿಂದಿಯ ಉದ್ಭವ್‌ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿಯನ್ನಇವರು ಶುರು ಮಾಡಿದ್ದರು. ಆದರ ನಂತರ ತೆರೆಕಂಡ ಕನ್ನಡದ “ಆಸ್ಪೋಟ” ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.ಇದರ ನಡುವೆಯೇ ದತ್ತಣ್ಣ ಅವರ ಸ್ನೇಹಿತರು ಮದುವೆ ವಿಚಾರ ಮಾತನಾಡಿದ್ದಾರೆ. “ದತ್ತಣ್ಣ ಅವರ ಪ್ರಕಾರ ಮದುವೆ, ಸಂಸಾರ ಎಲ್ಲಾ ಗೋಳು ಅಂತ ಆಗಿತ್ತು. ಚಿಕ್ಕಂದಿನಿಂದಲೇ ಅವರಿಗೆ ಮದುವೆ ಬಗ್ಗೆ ಆಸಕ್ತಿ ಇರಲಿಲ್ಲ. ಜೀವನದಲ್ಲಿ ಸಾಧನೆ ಮಾಡಬೇಕು, ಆದರೆ ಮದುವೆ ಆಗೋದಿಲ್ಲ ಅಂತ ಡಿಸೈಡ್‌ ಮಾಡಿಬಿಟ್ಟಿದ್ರಂತೆ, ಯಾವಗಲೂ ಫ್ರೀ ಆಗಿ ಹ್ಯಾಪಿ ಆಗಿ ಇರಬೇಕು ಅಂತ ದತ್ತಣ್ಣ ಮದುವೆ ಆಗಿಲ್ಲ” ಅಂತ ಅವರ ಸ್ನೇಹಿತರು ಹೇಳಿದ್ದಾರೆ.

ಮದುವೆ, ಸಂಸಾರ ಎಲ್ಲಾ ಗೋಳು ಅಂತ ಬಹಳ ಜನ ಹೇಳೊದನ್ನ ನಾವು ಕೇಳಿರ್ತೀವಿ. ದತ್ತಣ್ಣ ಅವರ ಅಭಿಪ್ರಾಯವೂ ಸೇಮ್‌ ಇದೆ. ಹಾಗಾಗಿ ಅವರು ಮದುವೆ ಆಗಬೇಕು ಅನ್ನೋ ವಿಚಾರವನ್ನ ಕೈಬಿಟ್ಟರು.

-masthmagaa.com

Contact Us for Advertisement

Leave a Reply