masthmagaa.com:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಬಂದಿದ್ದು, ಅವರ ಗ್ಯಾರಂಟಿಗಯಿಂದಾಗಿ ಬೆಸ್ಕಾಂ ಅಧಿಕಾರಿಗಳು ಈಗಾಗಲೇ ಪರದಾಡುತ್ತಿದ್ದಾರೆ. ಇದೀಗ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಹಿನ್ನೆಲೆ ಅಜ್ಜಿಯೊಬ್ರು, ಬಸ್ನಲ್ಲಿ ಟಿಕೆಟ್ಗೆ ದುಡ್ಡು ನೀಡದೇ ಕಿರಿಕ್ ಮಾಡಿದ್ದಾರೆ. ಟಿಕೆಟ್ ಹಣ ಕೇಳಿದ್ದಕ್ಕೆ, ನಾನು ರೊಕ್ಕ ಕೊಡಲ್ಲ. ಮಸ್ಕಿ ಶಾಸಕ ತುರವಿಹಾಳ ಬಸನಗೌಡ ದುಡ್ಡು ಕೊಡಬೇಡ ಅಂತ ಹೇಳಿದ್ದಾನೆ, ನಾನು ದುಡ್ಡು ಕೊಡಲ್ಲ ಅಂತ ಹೇಳಿ ಅಜ್ಜಿ ಹಠ ಹಿಡಿದಿದ್ದಾರೆ. ಸರ್ಕಾರ ಇನ್ನೂ ನಮಗೆ ಆದೇಶ ಮಾಡಿಲ್ಲ ಮಾಡಿದ ಮೇಲೆ ದುಡ್ಡು ಕೊಡಬೇಡ ಅಂತೇಳಿ ಅಜ್ಜಿ ಮನವೊಲಿಸುವಲ್ಲಿ ಕೊನೆಗೂ ಕಂಡಕ್ಟರ್ ಯಶಸ್ವಿಯಾಗಿದ್ದಾರೆ.
-masthmagaa.com
Contact Us for Advertisement