masthmagaa.com:
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದ 9 ಮಂದಿ ಜಡ್ಜ್ಗಳು ಇವತ್ತು ಸುಪ್ರೀಂಕೋರ್ಟ್ ಜಡ್ಜ್ಗಳಾಗಿ ಪ್ರಮಾಣವಚನ ಸ್ವೀಕರಿಸಿದ್ರು. ಇದರಲ್ಲಿ ಕರ್ನಾಟಕದ ಹೈಕೋರ್ಟ್ ಜಡ್ಜ್ ಬಿ. ವಿ. ನಾಗರತ್ನ ಕೂಡ ಇದ್ದರು. ಇವರು ಮಾಜಿ ಸಿಜೆಐ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ. ಜಸ್ಟಿಸ್ ಬಿ.ವಿ. ನಾಗರತ್ನ 2027ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶೆ ಆಗುವ ಸಾಧ್ಯತೆ ಇದೆ. ಹಾಗೇನಾದ್ರೂ ಆದ್ರೆ ದೇಶದ ಮೊದಲ ಮಹಿಳಾ ಸಿಜೆಐ ಎನಿಸಿಕೊಳ್ಳಲಿದ್ದಾರೆ. ಸುಪ್ರೀಂಕೋರ್ಟ್ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಿಜೆಐ ಎನ್.ವಿ. ರಮಣ ನೂತನ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ್ರು. ಇನ್ನು ಸುಪ್ರಿಂಕೋರ್ಟ್ ಇತಿಹಾಸದಲ್ಲೇ 9 ನ್ಯಾಯಮೂರ್ತಿಗಳು ಒಂದೇ ದಿನ ಪ್ರಮಾಣವಚನ ಸ್ವೀಕರಿಸಿದ್ದು ಇದೇ ಮೊದಲು. ಈ ಮೂಲಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಮಂಜೂರಾಗಿರೋ ಒಟ್ಟು ಬಲ 34. ಅದರಲ್ಲಿ 33 ಸ್ಥಾನ ಫಿಲ್ ಆದಂತಾಗಿದೆ.
-masthmagaa.com
Contact Us for Advertisement