masthmagaa.com:
ಕರ್ನಾಟಕದಲ್ಲಿ ಆಜಾನ್ಗೆ ಸಂಬಂಧಿಸಿದಂತೆ ಧ್ವನಿವರ್ಧಕಗಳ ಬಗ್ಗೆ ವಿವಾದ ಎದ್ದಿರುವ ಬೆನ್ನಲ್ಲೇ ಈಗ ಮಹರಾಷ್ಟ್ರದಲ್ಲೂ ಕೂಡ ಮಸೀದಿ, ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಹಾಗೆ ನೋಡಿದ್ರೆ ಈ ವಿವಾದ ಮಹರಾಷ್ಟ್ರದಿಂದಲೇ ಶುರುವಾಯ್ತು ಆದ್ರೆ ಕರ್ನಾಟಕದಲ್ಲಿ ಒಳ್ಳೆ ಮೈಲೇಜ್ ಸಿಕ್ತು. ಇನ್ನು ಈ ಬಗ್ಗೆ ಮಾತಾಡಿರೋ ನಾಗ್ಪುರದ ಜಾಮಾ ಮಸೀದೀಯ ಚೇರ್ಮನ್ ಮೊಹಮದ್ ಹಫೀಜುರ್ ರಹ್ಮಾನ್, ಆಜಾನ್ ಜಾಸ್ತಿ ಅಂದ್ರೆ 2 ರಿಂದ ಎರಡುವರೆ ನಿಮಿಷ ಇರುತ್ತೆ ಸೌಂಡ್ ಕೂಡ ಜಾಸ್ತಿ ಇರಲ್ಲ. ಇದು ಶಬ್ದ ಮಾಲಿನ್ಯದ ಪರಿಧಿ ಒಳಗೆ ಬರಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement