masthmagaa.com:
ಕೇಂದ್ರ ಸಚಿವ ರಾವ್ ಸಾಹೇಬ್ ಧನ್ವೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಗೂಳಿಗೆ ಹೋಲಿಸಿದ್ದಕ್ಕೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಇದು ಇನ್ಡೀಸೆಂಟ್ ಮತ್ತು ಶಾಕಿಂಗ್ ಹೇಳಿಕೆ. ಈಗಿಂದೀಗಲೇ ಅವರನ್ನ ಪಕ್ಷದಿಂದ ತೆಗೆದು ಹಾಕಬೇಕು ಅಂತ ಹೇಳಿದ್ದಾರೆ. ಮಹಾರಾಷ್ಟ್ರದ ಜಲ್ನಾದಲ್ಲಿ ಮಾತನಾಡಿದ್ದ ಹಣಕಾಸು ಇಲಾಖೆ ರಾಜ್ಯಖಾತೆ ಸಚಿವ ರಾವ್ ಸಾಹೇಬ್ ಧನ್ವೆ, ರಾಹುಲ್ ಗಾಂಧಿಯಿಂದ ಯಾರಿಗೂ ಏನೂ ಪ್ರಯೋಜನ ಇಲ್ಲ. ಅವರು ಗೂಳಿ ಇದ್ದಂತೆ.. ಎಲ್ಲಾ ಕಡೆ ಸುತ್ತಾಡ್ತಿರ್ತಾರೆ. ನಾನು 20 ವರ್ಷಗಳಿಂದ ಲೋಕಸಭೆಯಲ್ಲಿದ್ರೂ ರಾಹುಲ್ ಗಾಂಧಿ ಯಾವುದೇ ಕೆಲಸ ಮಾಡಿದ್ದು ನೋಡಿಲ್ಲ ಅಂತ ಹೇಳಿದ್ರು.
-masthmagaa.com
Contact Us for Advertisement