masthmagaa.com:
ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಇದ್ದ ಕೆಟ್ಟ ಭಯ ಒಂದು ಸತ್ಯ ಆಗಿದೆ. ಪಾದದ ಗಾಯದಿಂದ ಬಳಲುತ್ತಿದ್ದ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗ ನಡೀತಿರೋ ICC ವಿಶ್ವಕಪ್ ಟೂರ್ನಮೆಂಟ್ನಿಂದ ರೂಲ್ಡ್ ಔಟ್ ಆಗಿದ್ದಾರೆ. ಹಾಗಂತ ಸ್ವತಃ ಪಾಂಡ್ಯ X ನಲ್ಲಿ ಪೋಸ್ಟ್ ಹಾಕಿದ್ದಾರೆ. ಅವ್ರ ಜಾಗಕ್ಕೆ ಕರ್ನಾಟಕದ ಫಾಸ್ಟ್ ಬೌಲರ್ ಪ್ರಸಿದ್ ಕೃಷ್ಣ ತಂಡಕ್ಕೆ ಸೇರೋಕೆ ICC ಟೆಕ್ನಿಕಲ್ ಕಮಿಟಿ ಅಪ್ರೂವಲ್ ನೀಡಿದೆ. ಆದ್ರೆ ಈಗಾಗ್ಲೆ ಭಾರತದ ಪೇಸರ್ಗಳು ಎದುರಾಳಿ ಬ್ಯಾಟರ್ಗಳನ್ನ ಧೂಳಿಪಟ ಮಾಡ್ತಿರೋದ್ರಿಂದ ಪ್ರಸಿದ್ ಕಣಕ್ಕಿಳಿಯೋದು ಡೌಟೇ. ಆದ್ರೆ ಬ್ಯಾಟಿಂಗ್ನಲ್ಲಿ ಲೋವರ್ ಆರ್ಡರ್ಗೆ ಬಲ ತುಂಬ್ತಿದ್ದ ಪಾಂಡ್ಯ ಬದಲಿಗೆ ಅಶ್ವಿನ್ ಅಥ್ವಾ ಶಾರ್ದುಲ್ ಠಾಕುರ್ ಎಫೆಕ್ಟಿವ್ ಆಗ್ತಾರಾ ಅಂತ ಕಾದು ನೋಡ್ಬೇಕಿದೆ.
-masthmagaa.com
Contact Us for Advertisement