ತೇಜಸ್ವಿ ಯಾದವ್‌ ಬದಲು ತೇಜಸ್ವಿ ಸೂರ್ಯರಿಗೆ ಟೀಕಿಸಿದ ಕಂಗನಾ!

masthmagaa.com:

ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಾಗುವ ಬಾಲಿವುಡ್‌ ನಟಿ, ಬಿಜೆಪಿ ನಾಯಕಿ, ಮಂಡಿ ಲೋಕಸಭಾ ಅಭ್ಯರ್ಥಿ ಕಂಗನಾ ರಾಣವತ್‌ ಮತ್ತೊಂದು ಎಡವಟ್ಟು ಮಾಡ್ಕೊಂಡಿದ್ದಾರೆ. ಪ್ರಚಾರ ಸಭೆಯೊಂದ್ರಲ್ಲಿ ಬಿಹಾರ್‌ನ ಮಾಜಿ ಡಿಸಿಎಂ ತೇಜಸ್ವಿ ಯಾದವ್‌ ಅಂತೇಳೋ ಬದಲು ತೇಜಸ್ವಿ ಸೂರ್ಯ ಗೂಂಡಾಗಿರಿ ಮಾಡ್ತಾರೆ, ಮೀನು ತಿಂತಾರೆ ಅಂತ ಹೇಳಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್‌ ಆಗಿದ್ದು ತೇಜಸ್ವಿ ಯಾದವ್‌ ರಿಯಾಕ್ಟ್‌ ಮಾಡಿ, ʻಯಾರು ಈ ಮಹಿಳೆʼ ಅಂತ ಪ್ರಶ್ನಿಸಿ ಟೀಕಿಸಿದ್ದಾರೆ. ಮತ್ತೊಂದು ಕಡೆ ಕಂಗನಾ, ಅಮಿತಾಬ್‌ ಬಚ್ಚನ್‌ ಬಿಟ್ರೆ, ಈಗ ತಮಗೆ ಮಾತ್ರ ದೇಶದಲ್ಲಿ ಎಲ್ಲಿ ಹೋದ್ರು ಅಭಿಮಾನಿಗಳು, ಜನರು ಸೇರ್ಕೊತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply