masthmagaa.com:
ರಾಜ್ಯದಲ್ಲಿ ಒಮೈಕ್ರಾನ್ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಕ್ಲಸ್ಟರ್ ಮ್ಯಾನೇಜ್ಮೆಂಟ್ಗೆ ಹೆಚ್ಚು ಒತ್ತು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎರಡು ಥರದ ಕ್ಲಸ್ಟರ್ ಮ್ಯಾನೇಜ್ಮೆಂಟ್ಗೆ ಸೂಚನೆ ಕೊಡಲಾಗಿದೆ. ಒಂದನೇದು ಶಾಲೆ, ಹಾಸ್ಟೆಲ್ಗಳಲ್ಲಿನ ಕ್ಲಸ್ಟರ್. ಎರಡನೇದು ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿನ ಕ್ಲಸ್ಟರ್. ಬೆಂಗಳೂರಿನಲ್ಲಿ ಮೊದಲು 10 ಕೇಸ್ ಬಂದ್ರೆ ಅದನ್ನ ಕ್ಲಸ್ಟರ್ ಅಂತ ಮಾಡ್ತಿದ್ವಿ. ಈಸಲ ಮೂರು ಕೇಸ್ ಬಂದ್ರೂ ಕ್ಲಸ್ಟರ್ ಅಂತ ಪರಿಗಣಿಸಲು ತೀರ್ಮಾನ ಮಾಡಿದ್ದೀವಿ. ಕ್ಲಸ್ಟರ್ನಲ್ಲಿರೋರಿಗೆ ಟೆಸ್ಟ್, ಟ್ರೀಟ್ಮೆಂಟ್ ಮತ್ತು ವ್ಯಾಕ್ಸಿನೇಷನ್ಗೆ ಒತ್ತು ಕೊಡಲಾಗುತ್ತೆ ಅಂತಾನೂ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಎರಡು ಡೋಸ್ ಲಸಿಕೆ ಹಾಕ್ಕೊಂಡೋರಿಗೆ ಮಾತ್ರ ಮಾಲ್ ಮತ್ತು ಚಿತ್ರಮಂದಿರಗಳ ಒಳಗೆ ಬಿಡೋ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದ ಬೆನ್ನಲ್ಲೇ ಇವತ್ತು ಬೆಂಗಳೂರಿನ ವಿವಿಧ ಮಾಲ್ಗಳಲ್ಲಿ ಇವತ್ತು ಜನರ ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನ ಚೆಕ್ ಮಾಡಲಾಯ್ತು.
-masthmagaa.com