ಕ್ಲಸ್ಟರ್ ಮ್ಯಾನೇಜ್ಮೆಂಟ್​ಗೆ ಹೆಚ್ಚು ಒತ್ತು: ಬಸವರಾಜ್ ಬೊಮ್ಮಾಯಿ

masthmagaa.com:
ರಾಜ್ಯದಲ್ಲಿ ಒಮೈಕ್ರಾನ್​ ರೂಪಾಂತರಿ ಪತ್ತೆಯಾದ ಬೆನ್ನಲ್ಲೇ ಕ್ಲಸ್ಟರ್ ಮ್ಯಾನೇಜ್ಮೆಂಟ್​ಗೆ ಹೆಚ್ಚು ಒತ್ತು ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಎರಡು ಥರದ ಕ್ಲಸ್ಟರ್ ಮ್ಯಾನೇಜ್ಮೆಂಟ್​​ಗೆ ಸೂಚನೆ ಕೊಡಲಾಗಿದೆ. ಒಂದನೇದು ಶಾಲೆ, ಹಾಸ್ಟೆಲ್​​ಗಳಲ್ಲಿನ ಕ್ಲಸ್ಟರ್​. ಎರಡನೇದು ಬೆಂಗಳೂರಿನ ಅಪಾರ್ಟ್​ಮೆಂಟ್​​ಗಳಲ್ಲಿನ ಕ್ಲಸ್ಟರ್​. ಬೆಂಗಳೂರಿನಲ್ಲಿ ಮೊದಲು 10 ಕೇಸ್​ ಬಂದ್ರೆ ಅದನ್ನ ಕ್ಲಸ್ಟರ್ ಅಂತ ಮಾಡ್ತಿದ್ವಿ. ಈಸಲ ಮೂರು ಕೇಸ್​ ಬಂದ್ರೂ ಕ್ಲಸ್ಟರ್​ ಅಂತ ಪರಿಗಣಿಸಲು ತೀರ್ಮಾನ ಮಾಡಿದ್ದೀವಿ. ಕ್ಲಸ್ಟರ್​​ನಲ್ಲಿರೋರಿಗೆ ಟೆಸ್ಟ್, ಟ್ರೀಟ್​ಮೆಂಟ್ ಮತ್ತು ವ್ಯಾಕ್ಸಿನೇಷನ್​ಗೆ ಒತ್ತು ಕೊಡಲಾಗುತ್ತೆ ಅಂತಾನೂ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಎರಡು ಡೋಸ್ ಲಸಿಕೆ ಹಾಕ್ಕೊಂಡೋರಿಗೆ ಮಾತ್ರ ಮಾಲ್ ಮತ್ತು ಚಿತ್ರಮಂದಿರಗಳ ಒಳಗೆ ಬಿಡೋ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದ ಬೆನ್ನಲ್ಲೇ ಇವತ್ತು ಬೆಂಗಳೂರಿನ ವಿವಿಧ ಮಾಲ್​ಗಳಲ್ಲಿ ಇವತ್ತು ಜನರ ವ್ಯಾಕ್ಸಿನ್​ ಸರ್ಟಿಫಿಕೆಟ್​​ ಅನ್ನ ಚೆಕ್ ಮಾಡಲಾಯ್ತು.
-masthmagaa.com

Contact Us for Advertisement

Leave a Reply