‘ಆಧುನಿಕ ಭಾರತೀಯ ಯುವತಿ’ಯರ ಬಗ್ಗೆ ಸಚಿವರ ವಿವಾದಾತ್ಮಕ ಹೇಳಿಕೆ

masthmagaa.com:

ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಆಧುನಿಕ ಭಾರತೀಯ ಯುವತಿಯರ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ. ಮಾಡ್ರನ್ ಇಂಡಿಯನ್ ವಿಮೆನ್ ಮದುವೆ ಆಗೋಕೆ ಇಷ್ಟ ಪಡಲ್ಲ. ಸಿಂಗಲ್ ಆಗೇ ಬಾಳೋಕೆ ಇಷ್ಟ ಪಡ್ತಾರೆ ಅಂತ ಹೇಳಿಕೆ ನೀಡಿದ್ದಾರೆ. ಜೊತೆಗೆ ಮದುವೆ ಆದ್ರೂ ಕೂಡ ಮಕ್ಕಳನ್ನ ಹೆರೋಕೆ ಇಷ್ಟಪಡಲ್ಲ., ಅದು ತಪ್ಪು ಅಂತ ಹೇಳಿದ್ದಾರೆ. ಇನ್ನೂ ಮುಂದುವರಿದ ಸಚಿವರು, ಇತ್ತೀಚೆಗೆ ಕೆಲ ಮಹಿಳೆಯರು ಬಾಡಿಗೆ ತಾಯಿ ಮೂಲಕ ಮಗು ಪಡೆಯೋದಕ್ಕೆ ಮುಂದಾಗ್ತಿದ್ದಾರೆ ಅಂದಿದ್ದಾರೆ. ಆರೋಗ್ಯ ಸಚಿವರ ಈ ಹೇಳಿಕೆ ವಿವಾದಕ್ಕೆ ಕಾರಣ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನಿಡಿರೋ ಬಿಜೆಪಿ ಜನರಲ್ ಸೆಕ್ರಟರಿ ಸಿಟಿ ರವಿ, ಎಲ್ಲ ಭಾರತೀಯ ಮಹಿಳೆಯರೂ ಆ ಥರ ಇಲ್ಲ. ನಮ್ಮಲ್ಲಿ ಕುಟುಂಬ ವ್ಯವಸ್ಥೆಗೆ ಗೌರವ ಇದೆ. ಕೆಲ ಕಡೆ ವಿದೇಶೀ ಸಂಸ್ಕೃತಿಯ ಪ್ರಭಾವದಿಂದ ಈ ರೀತಿ ಆಗ್ತಿದೆ ಅಷ್ಟೆ ಅಂತ ಹೇಳಿದ್ದಾರೆ. ಹಾಗೇ ಮುಂದುವರಿದ ಸಿಟಿ ರವಿ, ಭಾರತ ಹಿಂದೂ ರಾಷ್ಟ್ರ ಆಗಿತ್ತು, ಆಗಿದೆ, ಮುಂದೆಯೂ ಆಗಿರುತ್ತೆ ಅಂದ್ರು. ಮೊದಲೆಲ್ಲ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡ್ತಿತ್ತು. ಆದ್ರೆ ಜನಕ್ಕೆ ಈಗ ಅರ್ಥ ಆಗಿದೆ. ಎಲ್ಲ ಒಗ್ಗಟ್ಟಾಗಿದ್ದಾರೆ ಅಂತ ಸಿಟಿ ರವಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply