masthmagaa.com:
ಜಮ್ಮು ಕಾಶ್ಮೀರದ ರಜೌರಿ ಮತ್ತು ಥಾನಾಮಂಡಿ ನಡುವಿನ ರಸ್ತೆಯನ್ನು ಭದ್ರತೆಯ ಕಾರಣ ನೀಡಿ ಬಂದ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಉಗ್ರರು ಫುಲ್ ಶಸ್ತ್ರಸಜ್ಜಿತರಾಗಿ ಓಡಾಡಿರೋ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದ್ರ ಬೆನ್ನಲ್ಲೇ ಭಾರತೀಯ ಸೇನೆ ದೊಡ್ಡ ಮಟ್ಟದಲ್ಲಿ ಶೋಧ ಕಾರ್ಯಾಚರಣೆ ನಡೆಸ್ತಿದೆ. ಪೂಂಛ್ ಮತ್ತು ಪಿರ್ಪಂಜಲ್ ವಲಯದಲ್ಲಿ ಕಾಡಲ್ಲಿ ಅಡಗಿರೋ ಉಗ್ರರಿಗಾಗಿ ಕಳೆದ 27 ದಿನಗಳಿಂದ ಕಾರ್ಯಾಚರಣೆ ನಡೀತಿದೆ. ಈಗ ರಜೌರಿಯಲ್ಲಿ ನಡೀತಿರೋ ಕಾರ್ಯಾಚರಣೆ ಕೂಡ, ಅದರ ಭಾಗವೇ ಆಗಿದ್ದು ತೀವ್ರತರವಾಗಿ ಕಾರ್ಯಾಚರಣೆ ನಡೆಸಲಾಗ್ತಿದೆ. ಅಂದಹಾಗೆ ಪೂಂಛ್ನಲ್ಲಿ ನಡೀತಿರೋ ಕಾರ್ಯಾಚರಣೆಯಲ್ಲಿ ಈವರೆಗೆ 11 ಮಂದಿ ಯೋಧರು ಪ್ರಾಣ ಕಳ್ಕೊಂಡಿದ್ದಾರೆ.
-masthmagaa.com
Contact Us for Advertisement