ಜಮ್ಮು ಕಾಶ್ಮೀರದಲ್ಲಿ ಉಗ್ರರಿಗಾಗಿ ದೊಡ್ಡಮಟ್ಟದ ಶೋಧ ಕಾರ್ಯ!

masthmagaa.com:

ಜಮ್ಮು ಕಾಶ್ಮೀರದ ರಜೌರಿ ಮತ್ತು ಥಾನಾಮಂಡಿ ನಡುವಿನ ರಸ್ತೆಯನ್ನು ಭದ್ರತೆಯ ಕಾರಣ ನೀಡಿ ಬಂದ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಉಗ್ರರು ಫುಲ್ ಶಸ್ತ್ರಸಜ್ಜಿತರಾಗಿ ಓಡಾಡಿರೋ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇದ್ರ ಬೆನ್ನಲ್ಲೇ ಭಾರತೀಯ ಸೇನೆ ದೊಡ್ಡ ಮಟ್ಟದಲ್ಲಿ ಶೋಧ ಕಾರ್ಯಾಚರಣೆ ನಡೆಸ್ತಿದೆ. ಪೂಂಛ್​​​ ಮತ್ತು ಪಿರ್​​ಪಂಜಲ್​ ವಲಯದಲ್ಲಿ ಕಾಡಲ್ಲಿ ಅಡಗಿರೋ ಉಗ್ರರಿಗಾಗಿ ಕಳೆದ 27 ದಿನಗಳಿಂದ ಕಾರ್ಯಾಚರಣೆ ನಡೀತಿದೆ. ಈಗ ರಜೌರಿಯಲ್ಲಿ ನಡೀತಿರೋ ಕಾರ್ಯಾಚರಣೆ ಕೂಡ, ಅದರ ಭಾಗವೇ ಆಗಿದ್ದು ತೀವ್ರತರವಾಗಿ ಕಾರ್ಯಾಚರಣೆ ನಡೆಸಲಾಗ್ತಿದೆ. ಅಂದಹಾಗೆ ಪೂಂಛ್​​​ನಲ್ಲಿ ನಡೀತಿರೋ ಕಾರ್ಯಾಚರಣೆಯಲ್ಲಿ ಈವರೆಗೆ 11 ಮಂದಿ ಯೋಧರು ಪ್ರಾಣ ಕಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply