masthmagaa.com:
ಬಾಲಿವುಡ್ ಸಿನಿಮಾಗಳು ನೆಲಕಚ್ತಾ ಇದೆ. ಸಿನಿಮಾ ಚೆನ್ನಾಗಿದೆ ಅಂತ ಹೇಳೋರಿಗಿಂತ ಸಿನಿಮಾವನ್ನ ಟ್ರೋಲ್ ಮಾಡೋರೆ ಜಾಸ್ತಿ ಆಗಿದ್ದಾರೆ. ನೇಪಾಳದ ಕಠ್ಮಂಡುವಿನಲ್ಲಿ ‘ಆದಿಪುರುಷ್’ ಜೊತೆ ಎಲ್ಲಾ ಹಿಂದಿ ಸಿನಿಮಾಗಳನ್ನು ಬ್ಯಾನ್ ಮಾಡಲಾಗಿದೆ.
‘ಆದಿಪುರುಷ್’ ಸಿನಿಮಾದಲ್ಲಿ ಬರುವ ಡೈಲಾಗ್ ಬಗ್ಗೆ ಹಿಂದೂ ರಾಷ್ಟ್ರ ನೇಪಾಳದವರು ಕ್ಯಾತೆ ತೆಗೆದಿದ್ದಾರೆ. ‘ಸೀತೆ ಭಾರತದ ಮಗಳು’ ಎಂಬ ಸಂಭಾಷಣೆ ಚಿತ್ರದಲ್ಲಿ ಬರತ್ತೆ. ಈ ಸಂಭಾಷಣೆಯನ್ನು ತೆಗೆಯುವಂತೆ ಅಲ್ಲಿನವರು ಒತ್ತಾಯ ಮಾಡಿದ್ದರು. ಆದರೆ, ಇದಕ್ಕೆ ಕತ್ತರಿ ಹಾಕಿಲ್ಲ. ಇದೇ ಡೈಲಾಗ್ ಈಗಲೂ ಇದೆ. ಇದು ಕಠ್ಮಂಡು ಮಂದಿಯ ಕೋಪಕ್ಕೆ ಕಾರಣ ಆಗಿದೆ. ಹೀಗಾಗಿ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು ಹೊಸ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಅಡಿಯಲ್ಲಿ ಕಠ್ಮಂಡುವಿನಲ್ಲಿ ‘ಆದಿಪುರುಷ್’ ಸಿನಿಮಾ ಪ್ರದರ್ಶನಗೊಳ್ಳುವಂತಿಲ್ಲ. ಅಷ್ಟೇ ಅಲ್ಲ ಬಾಲಿವುಡ್ನ ಎಲ್ಲಾ ಚಿತ್ರಗಳನ್ನು ಬ್ಯಾನ್ ಮಾಡಿದ್ದಾರೆ. ‘ಆದಿಪುರುಷ್’ ಚಿತ್ರದಲ್ಲಿರುವ ಡೈಲಾಗ್ ನೇಪಾಳಿಗರ ಸಿಟ್ಟಿಗೆ ಕಾರಣ ಆಗಿದೆ ಎಂದು ಅವರು ಹೇಳಿದ್ದಾರೆ.
-masthmagaa.com
Contact Us for Advertisement