ನಾಳೆಯೇ ವಿಶ್ವಾಸಮತ ಯಾಚನೆ..!ಕಮಲ್​ನಾಥ್​​ಗೆ ರಾಜ್ಯಪಾಲರ ಪತ್ರ..!

masthmagaa.com:

ಮಧ್ಯಪ್ರದೇಶದಲ್ಲಿ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಬೆಳಗ್ಗೆಯಷ್ಟೇ ಕೊರೋನಾ ವೈರಸ್ ಕಾರಣ ನೀಡಿ ವಿಶ್ವಾಸಮತಯಾಚನೆ ಮಾಡದೇ ಅಧಿವೇಶನವನ್ನು ಮಾರ್ಚ್​ 26ಕ್ಕೆ ಮುಂದೂಡಿಕೆ ಮಾಡಲಾಗಿತ್ತು.

ಆದ್ರೆ ಇದೀಗ ಸಿಎಂ ಕಮಲ್​ನಾಥ್​​​ಗೆ ಪತ್ರ ಬರೆದಿರುವ ರಾಜ್ಯಪಾಲ ಲಾಲ್​ಜಿ ಟಂಡನ್​​, ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪರಿಗಣಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಹೀಗಾಗಿ ಅಧಿವೇಶನ ಮುಂದೂಡಿಕೆ ಮೂಲಕ ಸ್ವಲ್ಪ ಹೊತ್ತು ಆರಾಮಾಗಿ ಉಸಿರಾಡಿದ್ದ ಮಧ್ಯಪ್ರದೇಶ ಸರ್ಕಾರಕ್ಕೆ ಈಗ ಮತ್ತೆ ಉಸಿರು ಕಟ್ಟಿದಂತಾಗುತ್ತಿದೆ.

-masthmagaa.com

Contact Us for Advertisement

Leave a Reply