masthmagaa.com:
ಮಧ್ಯಪ್ರದೇಶದಲ್ಲಿ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ತಿದೆ. ಬೆಳಗ್ಗೆಯಷ್ಟೇ ಕೊರೋನಾ ವೈರಸ್ ಕಾರಣ ನೀಡಿ ವಿಶ್ವಾಸಮತಯಾಚನೆ ಮಾಡದೇ ಅಧಿವೇಶನವನ್ನು ಮಾರ್ಚ್ 26ಕ್ಕೆ ಮುಂದೂಡಿಕೆ ಮಾಡಲಾಗಿತ್ತು.
ಆದ್ರೆ ಇದೀಗ ಸಿಎಂ ಕಮಲ್ನಾಥ್ಗೆ ಪತ್ರ ಬರೆದಿರುವ ರಾಜ್ಯಪಾಲ ಲಾಲ್ಜಿ ಟಂಡನ್, ನಾಳೆಯೇ ವಿಶ್ವಾಸಮತ ಯಾಚನೆ ಮಾಡಬೇಕು. ಇಲ್ಲವಾದಲ್ಲಿ ನಿಮ್ಮ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪರಿಗಣಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಹೀಗಾಗಿ ಅಧಿವೇಶನ ಮುಂದೂಡಿಕೆ ಮೂಲಕ ಸ್ವಲ್ಪ ಹೊತ್ತು ಆರಾಮಾಗಿ ಉಸಿರಾಡಿದ್ದ ಮಧ್ಯಪ್ರದೇಶ ಸರ್ಕಾರಕ್ಕೆ ಈಗ ಮತ್ತೆ ಉಸಿರು ಕಟ್ಟಿದಂತಾಗುತ್ತಿದೆ.
-masthmagaa.com
Contact Us for Advertisement