masthmagaa.com:
ಲಖೀಂಪುರ್ಖೇರಿ ಹಿಂಸಾಚಾರ ಖಂಡಿಸಿ ನಾಳೆ ಮಹಾರಾಷ್ಟ್ರದ ಸರ್ಕಾರ ಬಂದ್ಗೆ ಕರೆ ನೀಡಿದೆ. ಶಿವಶೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಘೋಷಿಸಿದೆ. ನಾಳೆ ಒಂದು ದಿನದ ಮಟ್ಟಿಗೆ ಯಾವ ಸೇವೆಯೂ ಇರೋದಿಲ್ಲ ಅಂತ ಕೂಡ ತಿಳಿಸಿವೆ. ಮಹಾರಾಷ್ಟ್ರದ 12 ಕೋಟಿ ಜನರೂ ಈ ಬಂದ್ಗೆ ಬೆಂಬಲಿಸೋ ಮೂಲಕ ರೈತರ ಪರ ನಿಲ್ಲಬೇಕು ಅಂತ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ. ಆದ್ರೆ ಮಹಾರಾಷ್ಟ್ರ ವ್ಯಾಪಾರಿಗಳ ಸಂಘ ಈ ಬಂದ್ಗೆ ವಿರೋಧ ವ್ಯಕ್ತಪಡಿಸಿವೆ. ಕೊರೋನಾ ಮತ್ತು ಲಾಕ್ಡೌನ್ನಿಂದಾಗಿ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದೆ. ಈಗ ಮತ್ತೆ ಬಂದ್ ಮಾಡಿದ್ರೆ ಹೇಗೆ ಅಂತ ಕಿಡಿಕಾರಿವೆ.
-masthmagaa.com
Contact Us for Advertisement