ನಾಳೆ ಮಹಾರಾಷ್ಟ್ರ ಬಂದ್​​​​: ವ್ಯಾಪಾರಿಗಳ ಸಂಘಟನೆಯಿಂದ ವಿರೋಧ

masthmagaa.com:

ಲಖೀಂಪುರ್​​ಖೇರಿ ಹಿಂಸಾಚಾರ ಖಂಡಿಸಿ ನಾಳೆ ಮಹಾರಾಷ್ಟ್ರದ ಸರ್ಕಾರ ಬಂದ್​​​​​ಗೆ ಕರೆ ನೀಡಿದೆ. ಶಿವಶೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿ ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಘೋಷಿಸಿದೆ. ನಾಳೆ ಒಂದು ದಿನದ ಮಟ್ಟಿಗೆ ಯಾವ ಸೇವೆಯೂ ಇರೋದಿಲ್ಲ ಅಂತ ಕೂಡ ತಿಳಿಸಿವೆ. ಮಹಾರಾಷ್ಟ್ರದ 12 ಕೋಟಿ ಜನರೂ ಈ ಬಂದ್​​ಗೆ ಬೆಂಬಲಿಸೋ ಮೂಲಕ ರೈತರ ಪರ ನಿಲ್ಲಬೇಕು ಅಂತ ಸಿಎಂ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ. ಆದ್ರೆ ಮಹಾರಾಷ್ಟ್ರ ವ್ಯಾಪಾರಿಗಳ ಸಂಘ ಈ ಬಂದ್​​ಗೆ ವಿರೋಧ ವ್ಯಕ್ತಪಡಿಸಿವೆ. ಕೊರೋನಾ ಮತ್ತು ಲಾಕ್​ಡೌನ್​​ನಿಂದಾಗಿ ಈಗಾಗಲೇ ಸಾಕಷ್ಟು ಸಮಸ್ಯೆಯಾಗಿದೆ. ಈಗ ಮತ್ತೆ ಬಂದ್ ಮಾಡಿದ್ರೆ ಹೇಗೆ ಅಂತ ಕಿಡಿಕಾರಿವೆ.

-masthmagaa.com

Contact Us for Advertisement

Leave a Reply