masthmagaa.com:
ಲೋಕಸಭೆ ಚುನಾವಣೆ ಸಂಬಂಧ ಮಹಾರಾಷ್ಟ್ರದಲ್ಲಿ INDI ಮೈತ್ರಿಕೂಟ ಅಂದ್ರೆ ಮಹಾ ವಿಕಾಸ್ ಅಘಾಡಿ ತನ್ನ ಸೀಟು ಹಂಚಿಕೆಯನ್ನ ಅಂತಿಮಗೊಳಿಸಿದೆ. ಒಟ್ಟು 48 ಲೋಕಸಭಾ ಕ್ಷೇತ್ರಗಳಿರೊ ಮಹಾರಾಷ್ಟ್ರದ 21 ಕ್ಷೇತ್ರಗಳಲ್ಲಿ ಉದ್ದವ್ ಬಣದ ಶಿವಸೇನೆ (UBT) ಸ್ಫರ್ಧೆ ಮಾಡಲಿದ್ರೆ, ಕಾಂಗ್ರೆಸ್ 17 ಕಡೆ ಸ್ಫರ್ಧೆ ಮಾಡಲಿದೆ. ಇನ್ನುಳಿದ 10 ಕ್ಷೇತ್ರಗಳಲ್ಲಿ ಶರದ್ ಪವಾರ್ ಬಣದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಏಪ್ರಿಲ್ 19 ರಿಂದ ಮೇ 20 ವರೆಗೆ ಒಟ್ಟು ಐದು ಹಂತದಲ್ಲಿ ಲೋಕಸಭೆ ಚುನಾವಣೆಗೆ ವೋಟಿಂಗ್ ನಡೆಯಲಿದೆ. ಅತ್ತ ಕೇರಳದ ಪತ್ತನಂತಿಟ್ಟಾ ಲೋಕಸಭಾ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದಿರೊ ಅನಿಲ್ ಆಂಟೋನಿ ಸೋಲ್ತಾನೆ ಅಂತ ಅನಿಲ್ ತಂದೆ, ಕಾಂಗ್ರೆಸ್ನ ಹಿರಿಯ ನಾಯಕ ಎಕೆ ಆಂಟನಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರ್ಪಡೆಯಾಗಿರೋದು ತಪ್ಪು. ಅಲ್ದೇ ಕಾಂಗ್ರೆಸ್ ನಮ್ಮ ಧರ್ಮವಾಗಿದೆ. ಹೀಗಾಗಿ ಪತ್ತನಂತಿಟ್ಟಾದಲ್ಲಿ ಕಾಂಗ್ರೆಸ್ ಗೆಲ್ಲೋದು ನಿಶ್ಚಿತ ಅಂತ ಎ.ಕೆ ಆಂಟನಿ ತಿಳಿಸಿದ್ದಾರೆ.
-masthmagaa.com
Contact Us for Advertisement