ʻಡಿಕೆ ಸಹೋದರರನ್ನ ಕೊಲ್ಲಿʼ: ಪೋಸ್ಟ್‌ ಹಾಕಿದ ವ್ಯಕ್ತಿಯ ಬಂಧನ!

masthmagaa.com:

ʻಡಿಕೆ ಸಹೋದರರನ್ನು ಹತ್ಯೆ ಮಾಡಿ’ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ವ್ಯಕ್ತಿಯೊಬ್ಬನನ್ನ ಬೆಂಗಳೂರು ಪೊಲೀಸ್‌ ಬಂಧಿಸಿದ್ದಾರೆ. ‘ಡಿಕೆ ಸಹೋದರರನ್ನು ಕೊಲ್ಲಿ’ ಅನ್ನೋ ಕ್ಯಾಪ್ಶನ್‌ ಹಾಕಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವ್ರ ಸಹೋದರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರನ್ನು ಕೊಲ್ಲುವಂತೆ ಜನರನ್ನು ಒತ್ತಾಯಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಸಂಬಂಧ ಬೆಂಗಳೂರಿನ ಜಯನಗರ ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ಅವ್ರು ದೂರು ದಾಖಲಿಸಿದ್ದಾರೆ. ಅರೆಸ್ಟ್‌ ಆಗಿರೋ ವ್ಯಕ್ತಿಯನ್ನ ರಂಜಿತ್ ಆರ್‌ಎಂ ಅಂತ ಗುರುತಿಸಲಾಗಿದೆ. ಅಂದ್ಹಾಗೆ ಈ ಆರೋಪಿಯು ಬೆಂಗಳೂರು ನಗರ ಪೊಲೀಸರ ಬಳಿ ಸೈಬರ್ ಕ್ರೈಂ ಡಿಟೆಕ್ಟಿವ್ ಅಂತ ಹೇಳಿಕೊಂಡಿದ್ದಾನೆ. ಈತ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನ ಕೂಡ ಹಾಕಿದ್ದ. ಸದ್ಯ ಈ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸ್ತಿದ್ದಾರೆ.

-masthmagaa.com

Contact Us for Advertisement

Leave a Reply