ಸಂಪುಟ ದರ್ಜೆ ಸ್ಥಾನಮಾನ ಬೇಡ ಅಂದಿದ್ಯಾಕೆ ಮಾಜಿ ಸಿಎಂ ಬಿಎಸ್​​ವೈ?

masthmagaa.com:

ಇನ್ನು ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಫೋಟಗೊಂಡಿದೆ. ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಕೊಟ್ಟಿದ್ದಕ್ಕೆ ಎಂಟಿಬಿ ನಾಗರಾಜ್ ಬೇಜಾರ್ ಮಾಡ್ಕೊಂಡಿದ್ದಾರೆ. ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಚರ್ಚಿಸಿದ್ರು. ಆಮೇಲೆ ಮಾತನಾಡಿದ ಎಂಟಿಬಿ ನಾಗರಾಜ್​, ಸದ್ಯ ಕೊಟ್ಟಿರೋ ಖಾತೆಯನ್ನು ನಿರ್ವಹಿಸ್ತೇನೆ. ಮುಂದಿನ ದಿನಗಳಲ್ಲಿ ಒಳ್ಳೆ ಖಾತೆ ಕೊಡಿ ಅಂತ ಕೇಳಿದ್ದೀನಿ ಅಂದ್ರು. ಇನ್ನು ಪ್ರವಾಸೋದ್ಯಮ ಮತ್ತು ಜೀವಶಾಸ್ತ್ರ ಖಾತೆಯಿಂದ ಕೆರಳಿರೋ ಆನಂದ್ ಸಿಂಗ್ ಕೂಡ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಮಾತುಕತೆ ನಡೆಸಿದ್ರು. ಇವೆಲ್ಲದ್ರ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಸರ್ಕಾರದ ಕಡೆಯಿಂದ ನೀಡಲಾದ ಸಂಪುಟ ದರ್ಜೆ ಸ್ಥಾನಮಾನ ನನಗೆ ಬೇಡ ಅಂತ ಬಿಎಸ್​​​ ಯಡಿಯೂರಪ್ಪ ಹೇಳಿದ್ಧಾರೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಪತ್ರ ಬರೆದಿರೋ ಅವರು, ನನಗೆ ಸಂಪುಟ ದರ್ಜೆ ಸ್ಥಾನಮಾನ ಬೇಡ.. ಮಾಜಿ ಸಿಎಂಗೆ ನೀಡುವ ಸರ್ಕಾರಿ ಸೌಲಭ್ಯ ಮಾತ್ರ ನೀಡಿ ಅಂತ ಮನವಿ ಮಾಡಿದ್ದಾರೆ. ಅಂದಹಾಗೆ ನಿನ್ನೆಯಷ್ಟೇ ಬಿ.ಎಸ್ ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ರು.

-masthmagaa.com

Contact Us for Advertisement

Leave a Reply