ಎದೆ ಜಲ್ಲೆನಿಸುವ ಲವ್ ಸ್ಟೋರಿ! ಅಯ್ಯೋ.. ಇದನ್ನ ಫಿಲಮ್ಮೇ ಮಾಡಬೋದು!

masthmagaa.com:

ನೀವು ರೋಮಿಯೋ ಜೂಲಿಯೆಟ್​​​, ಲೈಲಾ ಮಜ್ನು ಸೇರಿದಂತೆ, ಯಾರ್‌ ಯಾರ್ದೋ ಲವ್‌ ಸ್ಟೋರಿ ಕೇಳಿ. ಅದ್ರಿಂದ ಇಂಪ್ರೆಸ್‌ ಆಗಿ , ನೀವು ಟ್ರೈ ಮಾಡಿರ್ತೀರಾ.. ಆದ್ರೆ ಈಗ ನಾವು ಹೇಳುವ , ವಿಚಿತ್ರದಲ್ಲಿಯೇ ವಿಚಿತ್ರ ಲವ್‌ ಸ್ಟೋರಿ ಕೇಳಿ ಖಂಡಿತ ಶಾಕ್‌ ಆಗ್ತೀರಾ. ಈ ಘಟನೆ ನಡ್ದಿರೋದು ಕೇರಳದ ಪಾಲಕ್ಕಡ್‌ನ ಅಯಲೂರ್​​​​ಮಲ್ಲಿ. ಈ ಲವ್‌ ಸ್ಟೋರಿಯ ಹೀರೊ ಅಲಿಂಚುವಟ್ಟಿಲ್ ರಹಮಾನ್. ಈತನಿಗೆ ತನ್ನ ಮನೆಯಿಂದ ಅರ್ಧ ಕಿಲೋಮೀಟರ್‌ ದೂರದಲ್ಲಿ ಇರುವ ಸಜಿತಾ ಎಂಬ ಹಿಂದೂ ಯುವತಿಯ ಜೊತೆಗೆ ಲವ್‌ ಆಗುತ್ತೆ. ಅವಳಿಗೆ 18 ವರ್ಷ.. ಅವನಿಗೆ 24 ವರ್ಷ..ಧರ್ಮ ಬೇರೆ ಬೇರೆ.. ಮನೆಯಲ್ಲಿ ಗೊತ್ತಾದ್ರೆ ಏನ್ ಕಥೆ ಅಂತ ಹೆದರಿಕೊಂಡಿದ್ರು ಪ್ರೇಮಿಗಳು.. ಹೀಗಿರುವಾಗ ಒಂದಿನ ಸಜಿತಾ ಕಾಣೆ ಆಗ್ತಾಳೆ. ಅವ್ರ ಮನೆಯವ್ರು ಕಂಪ್ಲೇಂಟ್‌ ಕೊಡ್ತಾರೆ, ಪೊಲೀಸರು ಸೇರಿ ಎಲ್ರು ಹುಡುಕ್ತಾರೆ. ಆದ್ರೆ ಸಜಿತ ಎಲ್ಲಿಯೂ ಸಿಗಲ್ಲ. ಕೊನೆಗೆ ಆ ಹುಡುಗಿ ಯಾವುದೋ ಹುಡುಗನೊಂದಿಗೆ ತಮಿಳುನಾಡಿಗೆ ಓಡಿ ಹೋಗಿದ್ದಾಳೆ ಅಂತ ಅಂದುಕೊಂಡು ಸುಮ್ಮನಾಗ್ತರೆ. ಇದಾದ 11 ವರ್ಷದ ನಂತ್ರ ರಹಮಾನ್‌ ಕೂಡ ಮನೆಯಲ್ಲಿ ಜಗ್ಳ ಆಡಿ, ಮನೆಬಿಟ್ಟು ಹೋಗ್ಬಿಟ್ಟ. ನಂತ್ರ ಸ್ವಲ್ಪ ದಿನ ಆದ್ಮೇಲೆ ರಹಮಾನ್‌ನ ಅಣ್ಣ ಕೆಲಸದ ನಿಮಿತ್ತ ಬೇರೆ ಜಿಲ್ಲೆಗೆ ಹೋಗಿದ್ರು. ಆಗ ಅಲ್ಲಿ ರಹಮಾನ್​​ನ ನೋಡಿದ್ದಾರೆ. ನಂತ್ರ ಅವ್ನನ್ನ ಫಾಲೋ ಮಾಡ್ಕೊಂಡು ಹೋದಾಗ ಆಶ್ಚರ್ಯ ಎದುರಾಗಿದೆ. ಅದೇನಂದ್ರೆ 11 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಸಜಿತಾಳ ಜೊತೆ ರಹಮಾನ್‌ ಮನೆ ಮಾಡಿಕೊಂಡು ಸಂಸಾರ ನಡೆಸ್ತಾ ಇರೋದು ಗೊತ್ತಾಗಿದೆ.
ನಂತ್ರ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ರಹಮಾನ್ ಮತ್ತು ಸಜಿತಾಳನ್ನು ಕರೆದು ವಿಚಾರಣೆ ನಡೆಸಿದ್ಧಾರೆ. ಆಗ ಮತ್ತೊಂದು ದಂಗಾಗುವ ವಿಚಾರ ಗೊತ್ತಾಗುತ್ತೆ. ಅದೇನಂದ್ರೆ 11 ವರ್ಷಗಳ ಹಿಂದೆ ಎಲ್ಲೇಲ್ಲೋ ಹುಡುಕ್ತಾ ಇದ್ದ ಸಜಿತಾ, ಇದೇ ರಹಮಾನ್‌ ಮನೆಯಲ್ಲಿ, ಅವ್ನ ಒಂದು ಚಿಕ್ಕ ರೂಮಿನಲ್ಲಿಯೆ 11 ವರ್ಷಗಳ ಕಾಲ ಇದ್ಲು ಅನ್ನೋದು ಗೊತ್ತಾಗಿದೆ. ರಹಮಾನ್‌ ಮನೆಯಲ್ಲಿ ಅಮ್ಮ, ಅಪ್ಪ ಮತ್ತು ಸಹೋದರಿ ಇದ್ರು. ಆದ್ರೆ ಅವರ್ಯಾರಿಗು ಇವ್ಳು ಅವ್ರ ಮನೆಯಲ್ಲಿ ಇರೋದು ಗೊತ್ತೇ ಇರ್ಲಿಲ್ಲ. ಇನ್ನು ಈ ರಹಮಾನ್‌ ಒಬ್ಬ ಪೇಯಿಂಟರ್‌, ಅವ್ನು ತಾನಿಲ್ಲದೆ ಇದ್ದಾಗ ಈ ರೂಮಿಗೆ ಲಾಕ್‌ ಹಾಕಿ ಹೋಗ್ತಾ ಇದ್ದ. ಯಾರಿಗೂ ತನ್ನ ರೂಮಿಗೆ ಬರದಂತೆ ನೋಡಿಕೊಳ್ತಾ ಇದ್ದ. ಇದೇ ವಿಚಾರಕ್ಕಾಗಿ ಸೈಕೋ ರೀತಿ ಆಡ್ತಾಇದ್ದ. ಊಟವನ್ನು ಅಷ್ಟೇ ರೂಮಲ್ಲಿಯೇ ಮಾಡ್ತೀನಿ ಅಂತ ರೂಮಿಗೆ ತೆಗೆದುಕೊಂಡು ಹೋಗ್ತಾ ಇದ್ದ. ಅದ್ರಲ್ಲಿಯೇ ಸಜಿತಾಗೂ ಕೊಡ್ತಾ ಇದ್ದ. ಅವ್ರ ಮನೆಯಲ್ಲಿದ್ದ ಎಲ್ರೂ ಕೆಲಸ ಮಾಡ್ತ ಇದ್ದ ಕಾರಣ ಇದ್ರ ಬಗ್ಗೆ ಯಾರು ಅಷ್ಟು ಗಮನ ಕೊಡ್ತಾ ಇರ್ಲಿಲ್ಲಾ. ಇನ್ನೊಂದು ವಿಷ್ಯ ಅಂದ್ರೆ, ಇವ್ನರೂಮಿಗೆ ಯಾವುದೇ ಅಟ್ಯಾಚ್‌ ಟಾಯ್‌ಲೇಟ್‌, ಬಾತ್‌ ರೂಮ್‌ ಇರ್ಲಿಲ್ಲಾ. ಹಾಗಾಗಿ ಇವ್ನು ತನ್ನ ರೂಮ್‌ನಲ್ಲಿದ್ದ ಕಿಟಕಿಯ ಸರಳುಗಳನ್ನ ತೆಗೆದು ಅದ್ರಮೂಲಕ ಯಾರಿಗೂ ಗೊತ್ತಾಗದಂತೆ ಅವಳನ್ನ ಕರೆದುಕೊಂಡು ಹೋಗ್ತಾ ಇದ್ದ. ಇದ್ರ ನಡುವೆ ರಹಮಾನ್‌ಗೆ ಮದುವೆಗಾಗಿ ಹುಡುಗಿಯನ್ನ ಹುಡುಕಲು ಪ್ರಾರಂಭಿಸಿದ್ರು. ಆಗ ಅವ್ನು ಮನೆಯಿಂದ ಸಡನ್‌ ಆಗಿ ಕಾಣೆ ಆಗಿದ್ದಾನೆ. ನಂತ್ರ ಸಿಕ್ಕಾಗ ಈ ಎಲ್ಲಾ ಕಥೆಗಳನ್ನು ಬಾಯಿ ಬಿಟ್ಟಿದ್ದಾನೆ. ಸದ್ಯ ಸಜಿತಾ, ರಹಮಾನ್‌ ಕೇಸ್‌ ಅನ್ನ ಪೊಲೀಸರು ಕೇರಳದ ಲೋಕಲ್‌ ಕೋರ್ಟ್‌ ಮುಂದೆ ಇಟ್ರು. ಸಜಿತಾ, ರಹಮಾನ್ ಜೊತೆ ಇರ್ತೀನಿ ಅಂದಿದ್ದಾಳೆ. ಅದಕ್ಕೆ ಕೋರ್ಟ್‌ ಕೂಡ ಒಪ್ಪಿಗೆ ಕೊಟ್ಟಿದೆ.

-masthmagaa.com

Contact Us for Advertisement

Leave a Reply