ರಾಜ್ಯದಲ್ಲಿ ಈಗ ಮುಸ್ಲಿಮರು ಕೆತ್ತಿದ ದೇವರ ವಿಗ್ರಹ ಫೈಟ್​!

masthmagaa.com:

ರಾಜ್ಯದಲ್ಲಿ ಹಿಜಬ್​​ನಿಂದ ಶುರುವಾದ ವಿವಾದ ಈಗ ಹಿಂದೂ ದೇವರ ವಿಗ್ರಹದವರೆಗೆ ಬಂದಿದೆ. ಮುಸ್ಲಿಮರು ಕೆತ್ತಿದ ಮೂರ್ತಿಗಳನ್ನ ಇನ್ಮುಂದೆ ಪ್ರತಿಷ್ಠಾಪನೆ ಮಾಡ್ಬಾರ್ದು ಅಂತ ಸ್ವಾಮೀಜಿಗಳು, ಹಿಂದೂ ಮುಖಂಡರು ಆಗ್ರಹಿಸಿದ್ದಾರೆ. ಅಂದ್ಹಾಗೆ ಕೆಲ ದಿನಗಳ ಹಿಂದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಹಲಾಲ್​ ವಿವಾದ ಎಲ್ಲಾ ಮಾಡ್ತಿದ್ದೀರಲಾ.. ಕೋಲಾರದಲ್ಲಿ ಶಿವಾರ ಪಟ್ಟಣ ಅನ್ನೋ ಊರಿದೆ. ಅಲ್ಲಿ ಕಳೆದ ಮೂವತ್ತು ವರ್ಷಗಳಿಂದ ಮುಸಲ್ಮಾನರು ಹಿಂದೂ ದೇವರ ವಿಗ್ರಹಗಳನ್ನ ಕೆತ್ತುತ್ತಿದ್ದಾರೆ. ಹಾಗಿದ್ರೆ ಅವರನ್ನ ಕೂಡ ಬಹಿಷ್ಕಾರ ಮಾಡ್ತೀರ ಅಂತ ಪ್ರಶ್ನೆ ಮಾಡಿದ್ದರು. ಹೀಗಾಗಿ ಮುಸ್ಲಿಮರು ಮೂರ್ತಿ ಕೆತ್ತುತ್ತಾರೆ ಅಂತ ಬಹುಶಃ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಅದನ್ನ ಕುಮಾರಸ್ವಾಮಿ ತಿಳಿಸಿಕೊಟ್ಟಿದ್ದಾರೆ. ಅವರಿಂದಲೇ ವಿಗ್ರಹ ಅಭಿಯಾನ ಶುರುವಾಗಿದೆ ಅಂತ ಕೆಲವರು ಎಲ್ಲಾ ಭಾರವನ್ನ ಕುಮಾರಸ್ವಾಮಿ ಮೇಲೆ ಹಾಕಿದ್ದಾರೆ.

-masthmagaa.com

Contact Us for Advertisement

Leave a Reply