ಸ್ವಲ್ಪದರಲ್ಲೇ ಬೆಂಕಿ ಅವಘಡದಿಂದ ಪಾರಾದ ಲಾಲು ಪ್ರಸಾದ್‌ ಯಾದವ್‌!

masthmagaa.com:

RJD ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಸ್ವಲ್ಪದರಲ್ಲೇ ಬೆಂಕಿ ಅವಘಡ ಒಂದ್ರಿದ್ದ ಪಾರಾಗಿದ್ದಾರೆ. ಜಾರ್ಖಾಂಡ್‌ನ ಪಾಲಂ ಜಿಲ್ಲೆಯ ಸರ್ಕಿಟ್‌ ಹೌಸ್‌ನಲ್ಲಿ ತಂಗಿದ್ದ ಇವ್ರ ರೂಮ್ನಲ್ಲಿ ಇವತ್ತು ಬೆಳಿಗ್ಗೆ ಆಕಸ್ಮಿಕ ಬೆಂಕಿ ಕಾಣಸಿಕೊಂಡಿದೆ. ಯಾದವ್‌ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಅಂತ ಅಧಿಕಾರಿಗಳು ಹೇಳಿದ್ದಾರೆ. ಬೆಳಿಗ್ಗೆ ಸುಮಾರು 8 ಗಂಟೆಗೆ ಉಪಹಾರ ಸೇವಿಸೋ ಟೈಮಲ್ಲಿ ಫ್ಯಾನ್‌ನಲ್ಲಿ ಬೆಂಕಿ ಕಾಣ್ಸಿಕೊಂಡಿದೆ. ಕೂಡಲೇ ಅವ್ರ ಆಪ್ತರು ಬೆಂಕಿಯನ್ನ ನಂದಿಸಿದ್ದಾರೆ ಅಂತ ಹೇಳಲಾಗಿದೆ.

-masthmagaa.com

Contact Us for Advertisement

Leave a Reply