masthmagaa.com:
ದೆಹಲಿ: ಇವತ್ತು ಗಲ್ಲು ಅಂತ ತಿಳಿದ ಬಳಿಕ ನಿರ್ಭಯಾ ಅತ್ಯಾಚಾರಿಗಳು ನಿನ್ನೆ ರಾತ್ರಿಯಿಡೀ ನಿದ್ದೆಯನ್ನೇ ಮಾಡಿಲ್ಲ. ಅವರನ್ನು ಗಲ್ಲಿಗೂ ಮುನ್ನ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲಾಗಿತ್ತು ಅಂತ ಜೈಲಾಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿಯಿಂದ ಆರೋಪಿಗಳು ಆಹಾರವನ್ನು ಸೇವಿಸಲು ನಿರಾಕರಿಸಿದ್ರು. ಅಲ್ಲದೆ ರಾತ್ರಿಯಿಡೀ ಎಚ್ಚರವಾಗೇ ಇದ್ದರು ಅಂತ ತಿಳಿದುಬಂದಿದೆ.
ಇನ್ನು ಆರೋಪಿಗಳಾದ ಅಕ್ಷಯ್ ಕುಮಾರ್, ಪವನ್ ಗುಪ್ತಾ, ವಿನಯ್ ಶರ್ಮಾ, ಮುಕೇಶ್ ಕುಮಾರ್ ಹಲವು ವರ್ಷ ಜೈಲಿನಲ್ಲೇ ಕಾಲ ಕಳೆದಿದ್ದಾರೆ. ಈ ವೇಳೆ ಮುಕೇಶ್ನನ್ನು ಹೊರತುಪಡಿಸಿ ಉಳಿದ ಆರೋಪಿಗಳು ಜೈಲಿನಲ್ಲಿ ಕೆಲಸ ಮಾಡಿದ್ದರು. ಅದರಂತೆ ಒಟ್ಟು 1 ಲಕ್ಷದ 37 ಸಾವಿರ ರೂಪಾಯಿ ದುಡಿದಿದ್ದಾರೆ. ಆರೋಪಿಗಳಲ್ಲಿ ಅಕ್ಷಯ್ 69 ಸಾವಿರ, ಪವನ್ 29 ಸಾವಿರ, ವಿನಯ್ 39 ಸಾವಿರ ರೂಪಾಯಿ ದುಡಿದಿದ್ದಾರೆ. ಈಗ ಈ ಹಣವನ್ನು ಅವರ ಕುಟುಂಬದವರಿಗೆ ನೀಡಲು ನಿರ್ಧರಿಸಲಾಗಿದೆ. ಜೊತೆಗೆ ನಾಲ್ವರು ಆರೋಪಿಗಳ ಬಟ್ಟೆ ಮತ್ತು ಇತರೆ ವಸ್ತುಗಳನ್ನು ಕೂಡ ಕುಟುಂಬದವರಿಗೆ ನೀಡಲಾಗುತ್ತೆ.
-masthmagaa.com
Contact Us for Advertisement