masthmagaa.com:
ವ್ಯಕ್ತಿಯೊಬ್ಬನ ಕೊಲೆ ಹಿನ್ನಲೆಯಲ್ಲಿ ರಾಜಸ್ಥಾನದ ಭಿಲ್ವಾರಾ ಪಟ್ಟಣದಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನ ಬಂದ್ ಮಾಡಲಾಗಿದೆ. ತನ್ನ ತಮ್ಮನ ಸಮಸ್ಯೆಯನ್ನ ಬಗೆಹರಿಸೋಕೆ ಹೋದ 22 ವರ್ಷದ ಹಿಂದೂ ಯುವಕನನ್ನ ಮುಸ್ಲಿಂ ವ್ಯಕ್ತಿಯೊಬ್ಬ ಹತ್ಯೆ ಮಾಡಿದ್ದು ಕೇಸ್ನ ವಿವರಗಳು ಇನ್ನು ಹೊರಬರಬೇಕಾಗಿದೆ. ಈ ಘಟನೆಯ ಬೆನ್ನಲ್ಲೆ ಅಲ್ಲಿನ ಕೆಲವು ಬಲಪಂಥೀಯ ಗುಂಪುಗಳು ಬಂದ್ಗಾಗಿ ಕರೆ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಾಳೆವರೆಗೂ ಇಂಟರ್ನೆಟ್ ಸೇವೆಯನ್ನ ಕಡಿತಗೊಳಿಸಲಾಗಿದೆ.
-masthmagaa.com
Contact Us for Advertisement