ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್​! ಪರ-ವಿರೋಧ!

masthmagaa.com:

ಮಹಾರಾಷ್ಟ್ರ ಏಕೀಕರಣ ಸಮಿತಿ ಅಥವಾ ಎಂಇಎಸ್​ ಅನ್ನ ಬ್ಯಾನ್​ ಮಾಡಬೇಕು ಅಂತ ಆಗ್ರಹಿಸಿ ಕೆಲ ಕನ್ನಡಪರ ಸಂಘಟನೆಗಳು ಡಿಸೆಂಬರ್​ 31ಕ್ಕೆ ಕರೆ ಕೊಟ್ಟಿರೋ ಕರ್ನಾಟಕ ಬಂದ್ ಅವತ್ತೇ ನಡೆಯುತ್ತಾ ಅಥವಾ ಹಿಂದೆ ಮುಂದೆ ಆಗುತ್ತಾ ಅನ್ನೋ ಅನುಮಾನ ಸಾಕಷ್ಟು ಜನರಿಗಿದೆ. ಈ ಬಗ್ಗೆ ಇವತ್ತು ಮಾತನಾಡಿದ ವಾಟಾಳ್​ ನಾಗರಾಜ್​, ಡಿಸೆಂಬರ್ 31ರಂದು ಬಂದ್​ ಮಾಡೇ ಮಾಡ್ತೀವಿ, ನಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದ್ವೇಳೆ ಬಂದ್​ ವಾಪಸ್ ಪಡೀಬೇಕು ಅಂದ್ರೆ ರಾಜ್ಯ ಸರ್ಕಾರ ಎಂಇಎಸ್​ ಅನ್ನ ಬ್ಯಾನ್​ ಮಾಡಬೇಕು. ಕನ್ನಡ ಚಿತ್ರರಂಗ ನೀಡಿರುವ ನೈತಿಕ ಬೆಂಬಲ ನಮಗೆ ಬೇಡ. ಅವರಿಗೋಸ್ಕರ ಬಂದ್ ದಿನಾಂಕವನ್ನ ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಕರ್ನಾಟಕ ಬಂದ್​ ಮಾಡೋದ್ರಿಂದ ಕನ್ನಡಿಗರಿಗೇ ತೊಂದ್ರೆಯಾಗುತ್ತೆ, ಬಡವರಿಗೇ ತೊಂದ್ರೆಯಾಗುತ್ತೆ ಹೊರತು, ಮಹಾರಾಷ್ಟ್ರದವರಿಗೆ ಏನೂ ತೊಂದ್ರೆ ಆಗಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂತ್​, ಒತ್ತಾಯಪೂರ್ವಕವಾಗಿ ಯಾವುದೇ ಬಂದ್​ ಮಾಡುವಂತಿಲ್ಲ. ಅಲ್ಲದೆ ಬಂದ್​​ ಬಗ್ಗೆ ಈವರೆಗೆ ಯಾರೂ ನಮ್ಮನ್ನ ಅಪ್ರೋಚ್​ ಮಾಡಿಲ್ಲ ಅಂತಾನೂ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply