masthmagaa.com:
ಮಹಾರಾಷ್ಟ್ರ ಏಕೀಕರಣ ಸಮಿತಿ ಅಥವಾ ಎಂಇಎಸ್ ಅನ್ನ ಬ್ಯಾನ್ ಮಾಡಬೇಕು ಅಂತ ಆಗ್ರಹಿಸಿ ಕೆಲ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರೆ ಕೊಟ್ಟಿರೋ ಕರ್ನಾಟಕ ಬಂದ್ ಅವತ್ತೇ ನಡೆಯುತ್ತಾ ಅಥವಾ ಹಿಂದೆ ಮುಂದೆ ಆಗುತ್ತಾ ಅನ್ನೋ ಅನುಮಾನ ಸಾಕಷ್ಟು ಜನರಿಗಿದೆ. ಈ ಬಗ್ಗೆ ಇವತ್ತು ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 31ರಂದು ಬಂದ್ ಮಾಡೇ ಮಾಡ್ತೀವಿ, ನಮ್ಮ ಹೋರಾಟದಲ್ಲಿ ಯಾವುದೇ ಬದಲಾವಣೆ ಇಲ್ಲ. ಒಂದ್ವೇಳೆ ಬಂದ್ ವಾಪಸ್ ಪಡೀಬೇಕು ಅಂದ್ರೆ ರಾಜ್ಯ ಸರ್ಕಾರ ಎಂಇಎಸ್ ಅನ್ನ ಬ್ಯಾನ್ ಮಾಡಬೇಕು. ಕನ್ನಡ ಚಿತ್ರರಂಗ ನೀಡಿರುವ ನೈತಿಕ ಬೆಂಬಲ ನಮಗೆ ಬೇಡ. ಅವರಿಗೋಸ್ಕರ ಬಂದ್ ದಿನಾಂಕವನ್ನ ಬದಲಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಕರ್ನಾಟಕ ಬಂದ್ ಮಾಡೋದ್ರಿಂದ ಕನ್ನಡಿಗರಿಗೇ ತೊಂದ್ರೆಯಾಗುತ್ತೆ, ಬಡವರಿಗೇ ತೊಂದ್ರೆಯಾಗುತ್ತೆ ಹೊರತು, ಮಹಾರಾಷ್ಟ್ರದವರಿಗೆ ಏನೂ ತೊಂದ್ರೆ ಆಗಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಒತ್ತಾಯಪೂರ್ವಕವಾಗಿ ಯಾವುದೇ ಬಂದ್ ಮಾಡುವಂತಿಲ್ಲ. ಅಲ್ಲದೆ ಬಂದ್ ಬಗ್ಗೆ ಈವರೆಗೆ ಯಾರೂ ನಮ್ಮನ್ನ ಅಪ್ರೋಚ್ ಮಾಡಿಲ್ಲ ಅಂತಾನೂ ಹೇಳಿದ್ದಾರೆ.
-masthmagaa.com
Contact Us for Advertisement