masthmagaa.com:
ಕಳೆದ ವಾರವಷ್ಟೇ ಸ್ವಾತಂತ್ರ್ಯದ ಬಗ್ಗೆ ನಾಲಗೆ ಹರಿಬಿಟ್ಟಿದ್ದ ಕಂಗನಾ ರಾಣಾವತ್ ಈಗ ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಗಾಂಧೀಜಿ ಮತ್ತು ಇತರರು ನೇತಾಜಿಯನ್ನು ಹ್ಯಾಂಡ್ ಓವರ್ ಮಾಡಲು ಒಪ್ಪಿದ್ರು ಅಂತ ಟೈಟಲ್ ಇರೋ ನ್ಯೂಸ್ ಪೇಪರ್ ಪ್ರತಿ ಶೇರ್ ಮಾಡಿರೋ ಕಂಗನಾ, ನೀವು ಒಂದೋ ಗಾಂಧೀಜಿ ಫ್ಯಾನ್ ಆಗಿರಬೇಕು ಅಥವಾ ನೇತಾಜಿ ಬೆಂಬಲಿಗರಾಗಿರಬೇಕು. ಎರಡೂ ಆಗಿರಲು ಸಾಧ್ಯವಿಲ್ಲ. ಆಯ್ಕೆ ಮಾಡಿ, ನಿರ್ಧರಿಸಿ ಅಂತ ಇನ್ಸ್ಟಾಗ್ರಾಂನಲ್ಲಿ ಬರೆದುಕೊಡಿದ್ರು. ಆ ನ್ಯೂಸ್ ಪೇಪರ್ ತುಂಡಿನಲ್ಲಿ ಮಹಾತ್ಮ ಗಾಂಧೀಜಿ, ನೆಹರು, ಜಿನ್ನಾ ಇವರೆಲ್ಲಾ ಬ್ರಿಟಿಷ್ ಜಡ್ಜ್ ಜೊತೆ ಒಪ್ಪಂದ ಮಾಡ್ಕೊಂಡಿದ್ರು. ಸುಭಾಶ್ ಚಂದ್ರ ಬೋಸ್ ದೇಶಕ್ಕೆ ಎಂಟ್ರಿ ಕೊಟ್ರೆ ಅವರನ್ನು ಬ್ರಿಟಿಷರಿಗೆ ಹ್ಯಾಂಡ್ ಓವರ್ ಮಾಡ್ತೀವಿ ಅನ್ನೋದು ಆ ಒಪ್ಪಂದವಾಗಿತ್ತು ಅಂತ ಆ ನ್ಯೂಸ್ಪೇಪರ್ ತುಣುಕಿನಲ್ಲಿ ಬರೆಯಲಾಗಿದೆ. ಈ ರೀತಿಯ ಪೋಸ್ಟ್ ಮಾಡೋ ಮೂಲಕ ಕಂಗನಾ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದ್ದಾರೆ ಅಂತ ಆರೋಪಿಸಿರೋ ಮಹಾರಾಷ್ಟ್ರ ಕಾಂಗ್ರೆಸ್, ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ.
-masthmagaa.com
Contact Us for Advertisement