masthmagaa.com:
ಟೀಂ ಇಂಡಿಯಾ ನಾಯಕತ್ವ ಸ್ಥಾನದ ಕಿರಿಕ್ ಸದ್ಯಕ್ಕೆ ಬಗೆಹರಿಯೋ ಲಕ್ಷಣ ಕಾಣ್ತಿಲ್ಲ. ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ವಿರಾಟ್ ಕೊಹ್ಲಿ ಬಿಸಿಸಿಐಗೆ ಇನ್ಡೈರೆಕ್ಟಾಗಿ ಶಾಲು ಸುತ್ತಿ ಹೊಡೆದಿದ್ರು. ಈ ಬಗ್ಗೆ ಪ್ರತಿಕ್ರಿಯಿಸೋಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ನೋ ಸ್ಟೇಟ್ಮೆಂಟ್ಸ್, ನೋ ಪ್ರೆಸ್ ಕಾನ್ಫರೆನ್ಸ್.. ನಾವು ಈ ಬಗ್ಗೆ ನಿರ್ಧಾರ ತಗೊಳ್ತೀವಿ.. ಎಲ್ಲವನ್ನೂ ಬಿಸಿಸಿಐಗೆ ಬಿಟ್ಟುಬಿಡಿ ಅಂತ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಪ್ರೆಸ್ ಮಿಟ್ ಬಗ್ಗೆ ಮಾತಾಡಿರೋ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಈ ಎಲ್ಲಾ ಗೊಂದಲಗಳನ್ನು ಬಿಸಿಸಿಐ ಅಧ್ಯಕ್ಷರಾಗಿರೋ ಸೌರವ್ ಗಂಗೂಲಿ ಬಗೆಹರಿಸಬೇಕು. ಈ ಗೊಂದಲ ಪರಿಹಾರಕ್ಕೆ ಅವರೇ ಸರಿಯಾದ ವ್ಯಕ್ತಿ ಅಂತ ಹೇಳಿದ್ದರು.
-masthmagaa.com
2021-12-16