masthmagaa.com:
ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರ ಕೇಸಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಅಂದು ನಡೆದ ಘಟನೆ ಅಕಸ್ಮಿಕವಾಗಿ ನಡೆದಿಲ್ಲ.. ಇದು ರೈತರ ಹತ್ಯೆಗೆ ವ್ಯವಸ್ಥಿತವಾಗಿ ರೂಪಿಸಿದ್ದ ಸಂಚು ಅಂತ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಇವತ್ತು ಕೋರ್ಟ್ನಲ್ಲಿ ಹೇಳಿದೆ. ಈ ಪ್ರಕರಣದ ಮುಖ್ಯ ಆರೋಪಿಯಾದ ಕೇಂದ್ರ ಗೃಹ ರಾಜ್ಯಖಾತೆ ಸಚಿವ ಅಜಯ್ ಮಿಶ್ರಾ ಮಗ ಆಶೀಶ್ ಮಿಶ್ರಾ ಮತ್ತು ಇತರರ ವಿರುದ್ಧ ಯೋಜಿತ ಹತ್ಯೆಯ ಕೇಸ್ ದಾಖಲಿಸಬೇಕು. ಈಗ ದಾಖಲಿಸಿರೋ ಉದ್ದೇಶಪೂರ್ವಕವಲ್ಲದ ಹತ್ಯೆ ಕೇಸ್ನ್ನು ಬದಲಿಸಬೇಕು ಅಂತ ಎಸ್ಐಟಿ ಮನವಿ ಮಾಡಿದೆ. ಅಂದಹಾಗೆ ಅಕ್ಟೋಬರ್ 3ರಂದು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ರೈತರ ಮೇಲೆ ಕಾರು ಹರಿಸಲಾಗಿತ್ತು. ಈ ಘಟನೆಯಲ್ಲಿ 8 ಮಂದಿ ಪ್ರಾಣ ಕಳ್ಕೊಂಡಿದ್ರು.
-masthmagaa.com
2021-12-14