masthmagaa.com:
ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಹಳ್ಳಿಯ ಜನರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ. ನಮ್ಮ ದೇಶದ ಗ್ರಾಮೀಣ ಜನ ಸಾಮಾಜಿಕ ಅಂತರವನ್ನು ಅತ್ಯಂತ ಶ್ರದ್ಧೆಯಿಂದ ಪಾಲಿಸಿದ್ದಾರೆ. ಇಡೀ ವಿಶ್ವವೇ ಭಾರತದ ಗ್ರಾಮೀಣ ಜನರ ತಿಳುವಳಿಕೆಯನ್ನು ಕೊಂಡಾಡುತ್ತಿದೆ. ಜೊತೆಗೆ ನಮ್ಮ ಹಳ್ಳಿಗರ ಆರೋಗ್ಯ ಜ್ಞಾನ, ಪರಂಪರಾಗತ ದೇಸಿ ಔಷಧಿಗಳ ತಿಳುವಳಿಕೆಯ ಪಾತ್ರವನ್ನು ಇಲ್ಲಿ ಕಡೆಗಣಿಸುವಂತಿಲ್ಲ. ದೇಶ-ವಿದೇಶದ ದೊಡ್ಡದೊಡ್ಡ ವಿದ್ವಾಂಸರಿಗೂ ಕೂಡ ಭಾರತದ ಹಳ್ಳಿಯ ಜನರನ್ನ ನೋಡಿ ತುಂಬಾ ಪ್ರೇರಣೆ ಸಿಗುತ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಜಾಗತಿಕ ಮಹಾಮಾರಿಯಿಂದ ತೊಂದರೆಗಳು ಆಗಿರುವುದು ನಿಜ. ಆದರೆ ಅದಕ್ಕೆ ಹೆದರುವ ಬದಲು ಭಾರತೀಯರು ಸೀಮಿತ ವ್ಯವಸ್ಥೆಗಳ ಹೊರತಾಗಿಯೂ ಕೂಡ ಹೋರಾಟವನ್ನು ಮಾಡಿದ್ದಾರೆ ಅಂತ ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
-masthmagaa.com
Contact Us for Advertisement