ಮೋದಿಗೆ ಅರ್ಥಶಾಸ್ತ್ರದ ಬಗ್ಗೆ ಗೊತ್ತಿಲ್ಲವಂತೆ..! ರಾಹುಲ್ ಕೆಂಡ

ಹರಿಯಾಣ: ಇಷ್ಟು ದಿನ ರಫೇಲ್ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಕೆಂಡಕಾರುತ್ತಿದ್ದ ರಾಹುಲ್ ಗಾಂಧಿ ನಿನ್ನೆ ದೇಶದ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಕುಟುಕಿದ್ಧಾರೆ. ಹರಿಯಾಣದ ಮಹೇಂದ್ರಗಢದಲ್ಲಿ ನಡೆದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಗೆ ಅರ್ಥಶಾಸ್ತ್ರದ ತಿಳುವಳಿಕೆ ಇಲ್ಲ.  2014ರ ಬಳಿಕ ನಾನು ಅಮೆರಿಕಾದ 2-3 ಹೆಸರಾಂತ ಅರ್ಥಶಾಸ್ತ್ರಜ್ಞರನ್ನು ಭೇಟಿಯಾಗಿದ್ದೆ. 2004-2014ರ ಅವಧಿಯಲ್ಲಿ ಭಾರತದ ಆರ್ಥಿಕತೆಯ ವೇಗದ ಬೆಳವಣಿಗೆಗೆ ಕಾರಣ ಮನ್ರೇಗಾ ಹಾಗೂ ಕೃಷಿ ಸಾಲ ಮನ್ನಾವೇ ಕಾರಣ ಎಂದು ಅವರು ನನಗೆ ತಿಳಿಸಿದರು ಅಂತ ಹೇಳಿದ್ದಾರೆ.

ಗಬ್ಬರ್ ಸಿಂಗ್ ಟ್ಯಾಕ್ಸ್​​ (ಜಿಎಸ್​ಟಿ) ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಾಶ ಮಾಡಿದೆ. ಭಾರತ ಜಗತ್ತಿಗೆ  ಪ್ರೀತಿಯಿಂದ ಬದುಕಲು, ವೇಗವಾಗಿ ಅಭಿವೃದ್ಧಿ ಹೊಂದಲು ಸಂದೇಶ ನೀಡುತ್ತಿದೆ. ಆದ್ರೆ ಇವತ್ತು ಒಂದು ಜಾತಿಯವರು ಇನ್ನೊಂದು ಜಾತಿಯವರೊಂದಿಗೆ ಹೊಡೆದಾಡುತ್ತಾರೆ. ಒಂದು ಧರ್ಮದವರು ಮತ್ತೊಂದು ಧರ್ಮದವರೊಡನೆ ಹೊಡೆದಾಡುತ್ತಾರೆ. ದೇಶದ ಘರಿಮೆ ಮತ್ತು ಆರ್ಥಿಕತೆಯನ್ನು ಪ್ರಧಾನಿ ಮೋದಿ ಹಾಳು ಮಾಡಿದ್ದಾರೆ ಇದರಿಂದ ಇಡೀ ಜಗತ್ತು ಭಾರತದತ್ತ ಅಪಹಾಸ್ಯ ಮಾಡುವಂತಾಗಿದೆ ಅಂತ ಹೇಳಿದ್ದಾರೆ.

ಇನ್ನು ಈ ರ್ಯಾಲಿಯಲ್ಲಿ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಭಾಗಿಯಾಗಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಸೋನಿಯಾ ಗಾಂಧಿ ರ್ಯಾಲಿಯನ್ನು ರದ್ದುಗೊಳಿಸಲಾಗಿತ್ತು. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಸೋನಿಯಾ ಗಾಂಧಿ ಭಾಗಿಯಾಗಿಯೇ ಇಲ್ಲ.

Contact Us for Advertisement

Leave a Reply